














ಕೇನ್ಯ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ 54ನೇ ವರ್ಷದ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಇಂದು ಕೇನ್ಯ ವಿಷ್ಣುನಗರದಲ್ಲಿ ನಡೆಯಲಿದೆ. ಸಂಜೆ 6.00 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ತೆಗೆಯುವುದು. 7.00 ಗಂಟೆಗೆ ಮೇಲೇರಿಗೆ ಬೆಂಕಿ ಕೊಡುವುದು, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 10ಕ್ಕೆ ಕುಳಿಚಾಟ. ಫೆ. 13ರಂದು ಬೆಳಿಗ್ಗೆ 4.30ಕ್ಕೆ ದೈವದ ಮೇಲೇರಿ ಪ್ರವೇಶ, ಬೆಳಿಗ್ಗೆ 6.00 ಪ್ರಸಾದ ವಿತರಣೆ ಬಳಿಕ ಮುಳ್ಳು ಗುಳಿಗ ನೇಮ ನಡೆಯಲಿದೆ. ಫೆ. 12ರಂದು ರಾತ್ರಿ 12.30ರಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ, ಎಡಮಂಗಲ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಭಕ್ತಾದಿಗಳು ಆಗಮಿಸಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಕೃಪೆಗೆ ಪಾತ್ರರಾಗುವಂತೆ ಕೇನ್ಯ ರವೀಂದ್ರನಾಥ ಶೆಟ್ಟಿ ತಿಳಿಸಿದ್ದಾರೆ.










