ಶ್ರೀ ಹರಿಹರೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ವೈಭವ ಸಂಪನ್ನ

0

ಸಾಂಸ್ಕೃತಿಕ ಕಾರ್ಯಕ್ರಮ, ಬೊಂಬೆಯಾಟ, ನೇಮೋತ್ಸವ

ಶ್ರೀ ಹರಿಹರೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ
ಫೆ.20ರಿಂದ22ರವರೆಗೆ ನಡೆಯಿತು.

ಫೆ.20ರ ಬೆಳಗ್ಗೆ ಹಸಿರು ಕಾಣಿಕೆ ಸಮರ್ಪಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.  ಸಾಯಂಕಾಲ ತಂತ್ರಿಗಳ ಆಗಮನ ವಾಗಿ ರಾತ್ರಿ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಫೆ. 21 ರಂದು ಬೆಳಿಗ್ಗೆ ಗಣಪತಿ ಹವನ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ ದೀಪಾರಾಧನೆ, ಚೆಂಡೆವಾದನ, ರಾತ್ರಿ ಮಹಾಪೂಜೆ, ರಾತ್ರಿ ದೇವರಬಲಿ ಉತ್ಸವ ಹೊರಡಟು, ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆಯಿತು. ಅಂದು ಬೆಳಗ್ಗೆ 6.00 ರಿಂದ ಸಂಜೆ 6.00 ತನಕ ಅರ್ಧ ಏಕಾಹ ಭಜನೆ ನಡೆಯಿತು.

ಫೆ. 22ರಂದು ಬೆಳಗ್ಗೆಯಿಂದ ಸಾಯಂಕಾಲ ತನಕ ಉಳ್ಳಾಗುಳು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆದು ಜಾತ್ರೋತ್ಸವ ಸಂಪನ್ನವಾಯಿರು.

ಸಾಂಸ್ಕೃತಿಕ ಕಾರ್ಯಕ್ರಮ:

ಫೆ. 20ರಂದು ಸಂಜೆ ಗಂಟೆ ಸ್ಥಳೀಯ ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಬಳಿಕ ಪ್ರಾಥಮಿಕ ಶಾಲಾ ವಿನೋದಾವಳಿಗಳು, ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಜರುಗಿತು. ಬಳಿಕ ಹವ್ಯಾಕ್ಷ ಎಸ್‌ ಇವರಿಂದ ಯೋಗ ಪ್ರದರ್ಶನ ನಡೆದು ರಾತ್ರಿ ಗಂಟೆ 9 ರಿಂದ ಕೌಸ್ತಭ ಕಲಾಸೇವಾ ಟ್ರಸ್ಟ್ ಕೂಜುಗೋಡು ಪ್ರಸ್ತುತಿಯಲ್ಲಿ “ಶ್ರೀರಾಮ ದರ್ಶನ ” ಮಕ್ಕಳ ಯಕ್ಷಗಾನ ನಡೆಯಿತು. ಬಳಿಕ ರಾತ್ರಿ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿ. ಫೆ.21 ರ ಸಂಜೆ ಗೋಪಾಲಕೃಷ್ಣ ಯಕ್ಷಗಾನ ಸಂಘ ಕಾಸರಗೋಡು ಇವರಿಂದ ಯಕ್ಷಗಾನ ಗೊಂಬೆಯಾಟ “ಶ್ರೀ ದೇವಿ ಮಹಾತ್ಮೆ ” ನಡೆಯಿತು.

ಹರಿಹರ ಪಲ್ಲತಡ್ಕದ ರಾಮಕೃಷ್ಣ ಕುದ್ಕುಳಿ ಅವರು 21 ವರ್ಷಗಳಿಂದ ನೀಡುತಿದ್ದ ಸೇವೆಯಾದ ದೇವಾಲಯದಿಂದ ಹರಿಹರದ ವರಗೆ ರಸ್ತೆ ಬದಿ ಲೈಟಿಂಗ್ಸ್ ವ್ಯವಸ್ಥೆ ಹಾಗೂ ಜಾತ್ರೋತ್ಸವ ಸಂದರ್ಭ ನೀಡುತಿದ್ದ ಪಾನೀಯ ವ್ಯವಸ್ಥೆ 25 ನೇ ವರ್ಷದಲ್ಲಿ ಒದಗಿಸಿದರು.