ಕೊರಗಜ್ಜನ ತುಳು ಭಕ್ತಿಗೀತೆ ಕೇಪುಳ ಪ್ರಿಯೆ ಮೊಗಪ್ಪೆ ಕೊರಗಜ್ಜನ ಸಾನಿಧ್ಯದಲ್ಲಿ ಕೊರಗತನಿಯ ಸಾನಿಧ್ಯದ ಧರ್ಮದರ್ಶಿಗಳಾದ ಶಾಂತಪ್ಪ ಪೂಜಾರಿ ಮೊಗಪ್ಪೆ ಮಾ. 6ರಂದು ಬಿಡುಗಡೆಗೊಳಿಸಿದರು.















ಈ ಭಕ್ತಿಗೀತೆಯನ್ನು ಆರ್.ಪಿ. ಕ್ರಿಯೇಷನ್ ಅರ್ಪಿಸಿದ್ದು, ನಿರ್ದೇಶಕ ಹಾಗೂ ಗಾಯಕ ರವಿ ಪಾಂಬಾರ್ ಅವರ ಮಾರ್ಗದರ್ಶನದಲ್ಲಿ ಗೀತೆ ಮೂಡಿಬಂದಿದೆ. ಪ್ರಖ್ಯಾತ ಗಾಯಕಿ ಕುಸುಮ ವೈ.ಎಸ್. ಅವರ ಸಹಗಾಯನ, ಯುವ ಸಾಹಿತಿ ಪ್ರಿಯಾ ಸುಳ್ಯ ಅವರ ಸಾಹಿತ್ಯ ಹಾಗೂ ರೋಹಿತ್ ಕುರಿಕ್ಕಾರ್ ಅವರ ಹಿನ್ನಲೆ ಧ್ವನಿಯಲ್ಲಿ ಮೂಡಿಬಂದಿದೆ. ಈ ಸಂದರ್ಭದಲ್ಲಿ ಉಮೇಶ್ ಕುಲಾಲ್ ಮೊಗಪ್ಪೆ, ಅಶೋಕ್ ಪೂಜಾರಿ ಮಾಣಿಮಜಲು, ಪ್ರವೀಣ್ ಪೂಜಾರಿ ಮಾಣಿಮಜಲು, ತನುಷ್ ಹಾಗೂ ತಂತ್ರಜ್ಞರು ಮತ್ತು ಮೊಗಪ್ಪೆ ಕೊರಗಜ್ಜ ಸಾನಿಧ್ಯದ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದ










