ಕುರುಂಜಿ ಭಾಗ್: ವಿದ್ಯಾರ್ಥಿನಿಗೆ ತಿಂಡಿ ತಂದು ಕೊಟ್ಟ ಆರೋಪ – ಯುವಕನಿಗೆ ಥಳಿತ

0

ಸುಳ್ಯದ ಕುರುಂಜಿಭಾಗ್ ಬಳಿ ಕಾಲೇಜು ವಿದ್ಯಾರ್ಥಿನಿಯೋರ್ವಳಿಗೆ ತಿಂಡಿ(ಉಣ್ಣಿಅಪ್ಪ) ತಂದು ಕೊಟ್ಟ ಯುವಕನೋರ್ವನಿಗೆ ಸ್ಥಳೀಯ ಕೆಲವು ಯುವಕರು ಥಳಿಸಿದ ಘಟನೆ ಏ. ೧೬ ರಂದು ರಾತ್ರಿ ವರದಿಯಾಗಿದೆ.

ಕಾಲೇಜು ಮುಗಿಸಿ ಹಾಸ್ಟೆಲ್ ಗೆ ತೆರಳಿದ್ದ ವಿದ್ಯಾರ್ಥಿನಿಗೆ ಆಕೆಯ ಕಾಲೇಜು ಸಹಪಾಠಿ ಎನ್ನಲಾಗಿರುವ ಯುವಕನೋರ್ವ ತಿಂಡಿ ತಂದು ಕೊಟ್ಟಿದ್ದ ಎಂದು ಹೇಳಲಾಗಿದ್ದು, ಇದನ್ನು ಗಮನಿಸಿದ ಕೆಲವು ಯುವಕರು ಆತನನ್ನು ಕರೆಸಿ ವಿಚಾರಿಸಿದರೆಂದೂ, ಆತನ ಉತ್ತರದಿಂದ ಹೆಚ್ಚು ಅನುಮಾನಕ್ಕೊಳಗಾದ ಅವರು ಆತನಿಗೆ ಥಳಿಸಿದರೆಂದೂ, ಅಲ್ಲಿ ಜನ ಜಮಾಯಿಸಿ, ವಿಷಯ ಪೋಲೀಸರಿಗೆ ತಿಳಿದು ಅವರು ಸ್ಥಳಕ್ಕೆ ಬಂದಾಗ ಯುವಕರೆಲ್ಲ ಜಾಗ ಖಾಲಿ ಮಾಡಿದ್ದರೆಂದೂ ಹೇಳಲಾಗಿದೆ. ಘಟನೆಯ ಕುರಿತು ಪೋಲೀಸರು ವಿಚಾರಿಸುತ್ತಿದ್ದಾರೆ.