ಸುಳ್ಯದ ಚೆನ್ನಕೇಶವ ಸರ್ಕಲ್ ಬಳಿಯ ಬಾಡಿಗೆ ಮನೆಯ ಬಾಲ್ಕನಿಗೆ ನೇಣು ಬಿಗಿದುಕೊಂಡು ಬಾಡಿಗೆದಾರ ಆತ್ಮಹತ್ಯೆಗೆ ಶರಣು

0

ಸುಳ್ಯದ ಎ.ಪಿ.ಎಂ.ಸಿ. ಸಮೀಪ ಚೆನ್ನಕೇಶವ ಸರ್ಕಲ್ ಬಳಿಯ ಬಾಡಿಗೆ ಮನೆಯೊಂದಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಮನೆಯ ಬಾಲ್ಕನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಮಡಪ್ಪಾಡಿ ಗ್ರಾಮದ ಕಜೆ ಪರಿಸರದ ವರದರಾಜ ಎಂಬ 45 ವರ್ಷ ಪ್ರಾಯದ ಈ ವ್ಯಕ್ತಿ ಕಳೆದ ನಾಲ್ಕು ತಿಂಗಳಿಂದ ಈ ಕಟ್ಟಡದಲ್ಲಿ ಬಾಡಿಗೆ ರೂಮಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರೆನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ