ಕನಕಮಜಲು : ಕಾಡಾನೆಯಿಂದ ಬಾಳೆ ತೋಟಕ್ಕೆ ಹಾನಿ

0

ಕನಕಮಜಲಿನ ಕಜೆಗದ್ದೆ ಗಣೇಶ್ ಎಂಬವರ ತೋಟಕ್ಕೆ ಮೇ 18ರಂದು ರಾತ್ರಿ ಕಾಡಾನೆ ದಾಳಿ ನಡೆಸಿ ಹಲವು ಬಾಳೆ ಗಿಡಗಳನ್ನು ಧ್ವಂಸ ಮಾಡಿದೆ. ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ಕಾಡಿಗೆ ಓಡಿಸುವುದರ ಮುಖಾಂತರ ಶಾಶ್ವತ ಪರಿಹಾರ ಒದಗಿಸಿ ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕೆಂದು ಸ್ಥಳೀಯ ಕೃಷಿಕರು ಒತ್ತಾಯಿಸಿದ್ದಾರೆ.