ಕೆಸರು ನಿಂತು ಸಂಚಾರ ದುಸ್ತರ : ಪಂಚಾಯತ್ ಜನಪ್ರತಿನಿಧಿಗಳು ಗಮನ ಹರಿಸುವಿರಾ ?
ಜಾಲ್ಸೂರು – ಸೋಣಂಗೇರಿ ಮುಖ್ಯ ರಸ್ತೆಯ ಅರಿಯಡ್ಕ ಎಂಬಲ್ಲಿ ಕೆಸರು ನಿಂತು ಸಂಚಾರ ದುಸ್ತರವೆನಿಸಿದೆ.















ಮಳೆಯ ನೀರಿಗೆ ಮೇಲಿನ ರಸ್ತೆಯ ಮಣ್ಣು ಮುಖ್ಯರಸ್ತೆಯಲ್ಲಿ ಬಂದು ನಿಂತಿದ್ದು, ಕೆಸರಾಗಿದೆ. ಬೈಕ್ ಗಳು ಸ್ಕಿಡ್ ಆದ ಘಟನೆಯೂ ನಡೆದಿದೆ. ನಡೆದಾಡುವುದಂತು ಹರಸಾಹಸವಾಗಿದೆ. ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಿ ರಸ್ತೆಯಲ್ಲಿ ಕೆಸರು ನಿಲ್ಲದಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಈ ಭಾಗದ ಜನರು ಒತ್ತಾಯಿಸಿದ್ದಾರೆ.










