ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ವತಿಯಿಂದ ಕುಮಾರಧಾರ ದೋಣಿಮಕ್ಕಿ ಪ್ರದೇಶದಲ್ಲಿ ವೃಕ್ಷಾರೋಪಣ ಅಭಿಯಾನ

0

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಹಾಗೂ ಡಾl ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಸುಬ್ರಹ್ಮಣ್ಯ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಜಂಟಿ ಆಶ್ರಯದಲ್ಲಿ ಕುಮಾರಧಾರ ದೋಣಿಮಕ್ಕಿ ಬರಡು ಭೂಮಿಯಲ್ಲಿ ಸುಮಾರು 150 ಹಣ್ಣು ಹಾಗೂ ಫಲವತ್ತತೆಯ ಗಿಡಗಳನ್ನು ನೆಡುವ ಕಾರ್ಯಕ್ರಮ ಜೂ.12 ರಂದು ಹಮ್ಮಿಕೊಳ್ಳಲಾಯಿತು.

ಪಂಜ ವಲಯ ಅರಣ್ಯಾಧಿಕಾರಿ ಸಂಧ್ಯಾರವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರ ಅಧ್ಯಕ್ಷ ಎಂಆರ್ ಪೂರ್ವ ರಾಷ್ಟ್ರ ಅಧ್ಯಕ್ಷ ಡಾl ಕೇದಿಗೆ ಅರವಿಂದ ರಾವ್ ಸಿದ್ದಗಂಗಯ್ಯ, ಕಿಶೋರ್ ಕರ್ನಾಂಡಿಸ್, ವಿಕಾಸಿ ಶೆಟ್ಟಿ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ನಿಯೋಜಿತ ಅಧ್ಯಕ್ಷ ಜಯಪ್ರಕಾಶ್, ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಬರಡುಭೂಮಿ ವೃಕ್ಷಾರೋಪನದ ರೂವಾರಿ ಡಾl ರವಿಕಕ್ಕೆ ಪದವು , ಸುಬ್ರಹ್ಮಣ್ಯ ಕುಕ್ಕೆ ಶ್ರೀಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ನಡು ತೋಟ , ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಧನೇಶ್, ಮುಖ್ಯ ಪೇದೆ ಪ್ರಮೀಳ, ಪಂಜ ವಲಯ ಉಪ ಅರಣ್ಯಾಧಿಕಾರಿ ಮಹಮ್ಮದ್ ಮೆಹಬೂಬ, ಗಸ್ತು ವನಪಾಲಕ ಧರಣಪ್ಪ,ವೀಕ್ಷಕ ಗಣೇಶ ಹೆಗಡೆ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನ ಪ್ರಭಾಕರ ಪಟ್ರೆ, ಅಶೋಕ್ ಮೂಲೆ ಮಜಲು, ಮೋಹನ್ ದಾಸ ರೈ, ಲೋಕೇಶ್ ಬಿ ಎನ್, ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಸ್ವಯಂಸೇವಕರು ಕುಕ್ಕೆ ಶ್ರೀ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸಿತರಿದ್ದರು.

ತದನಂತರ ನಡೆದ ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಸದಸ್ಯರಾದ ಅಶೋಕ ನೆಕ್ರಾಜೆ, ರಾಜ್ಯ ಪಂಜ ವಲಯ ಅರಣ್ಯಾಧಿಕಾರಿ ಸಂಧ್ಯಾ, ಪೊಲೀಸ್ ಸಹಾಯಕ ಉಪನಿರೀಕ್ಷಕ ಧನೀಶ್, ಪಂಜ ಗಸ್ತು ವನ ಪಾಲಕ ದರಣಪ್ಪ ಅವರನ್ನು ಸನ್ಮಾನಿಸಲಾಯಿತು. ಸುಬ್ರಹ್ಮಣ್ಯ ಕುಕ್ಕೆ ಸೀನಿಯರ್ ಚೇಂಬರ್ ನ ನೂತನ ಕಾರ್ಯದರ್ಶಿ ಗೋಪಾಲ್ ಎಣ್ಣೆಮಜಲ್ ಸ್ವಾಗತಿಸಿ ವಂದಿಸಿದರು.