ಸ್ನೇಹ ಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆ

0

ಆರೋಗ್ಯವೇ ಪ್ರಧಾನ ಸಂಪತ್ತು : ಡಾ. ದಾಮ್ಲೆ

ಆಸ್ತಿ, ಹಣ ಮತ್ತು ವಿದ್ಯೆಗಿಂತಲೂ ಮಿಗಿಲಾಗಿ ಆರೋಗ್ಯವೇ ನಮ್ಮ ಜೀವನದ ಪ್ರಧಾನ ಸಂಪತ್ತು. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ಆಹಾರ ಮತ್ತು ವ್ಯಾಯಾಮದ ನಿರ್ದಿಷ್ಟ ದಿನಚರಿ ಬಳಸಿಕೊಂಡರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ವೈದ್ಯರ ದಿನದಂದು ಅಧ್ಯಕ್ಷೀಯ ನುಡಿಗಳನ್ನು ಡಾ. ಚಂದ್ರಶೇಖರ ದಾಮ್ಲೆ ಯವರು ಹೇಳಿದರು.

ಆದರೆ ಸಮಾಜದಲ್ಲಿ ಆರೋಗ್ಯದ ರಕ್ಷಣೆಗೆ ವೈದ್ಯರ ಮಾರ್ಗದರ್ಶನ ಮುಖ್ಯವಾಗುತ್ತದೆ. ಹಾಗಾಗಿ ವೈದ್ಯರ ದಿನಾಚರಣೆಗೆ ಪ್ರಾಮುಖ್ಯವಿದೆ.

ಶಿಕ್ಷಣಕ್ಕೂ ಪತ್ರಿಕೆಗಳಿಗೂ ಹತ್ತಿರದ ಸಂಬಂಧವಿದೆ. ಕಲಿತವರ ಸಂಖ್ಯೆ ಹೆಚ್ಚಿದಂತೆಯೇ ಪತ್ರಿಕೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇಂದು ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುವ ಕಾಲದಲ್ಲಿ ಜನರು ಜಾಲತಾಣಗಳಲ್ಲಿ ಹೆಚ್ಚಾಗಿ ವಾರ್ತೆ ಹಾಗೂ ಇನ್ನಿತರ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ. ತಾಂತ್ರಿಕತೆಯೊಂದಿಗೆ ಸಂಭವಿಸುತ್ತಿರುವ ವೇಗದ ಬದಲಾವಣೆಗೆ ನಾವು ಹೊಂದಿಕೊಳ್ಳುವುದು ಅನಿವಾರ್ಯ ಎಂದು ಪತ್ರಿಕಾ ದಿನಾಚರಣೆಯ ಕುರಿತು ಡಾ. ದಾಮ್ಲೆಯವರು ಹೇಳಿದರು.
ಪತ್ರಿಕೆ ದಿನಾಚರಣೆಯ ಕುರಿತು ಶಿಕ್ಷಕಿ ಶ್ರೀಮತಿ ಕವಿತಾ ಇವರು ಪತ್ರಿಕೆಗಳು ಮತ್ತು ಜನಜೀವನಕ್ಕೆ ಅವಿನಾಭಾವ ಸಂಬಂಧವಿದೆ. ಪತ್ರಿಕೆಗಳು ಸಮೂಹ ಮಾಧ್ಯಮಗಳು. ಪತ್ರಿಕೆಗಳು ಹೆಚ್ಚಿನ ಜ್ಞಾನ ಮತ್ತು ಶಬ್ದ ಭಂಡಾರ ನೀಡುತ್ತವೆ ಎಂದು ತಿಳಿಸಿದರು.

ಇಂದೇ ಡಾ. ಚಂದ್ರಶೇಖರ ದಾಮ್ಲೆಯವರ ಹುಟ್ಟುಹಬ್ಬದ ಆಚರಣೆಯೂ ಜರಗಿತು. ಶಾಲಾ ಮುಖ್ಯ ಉಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಇವರು ಶುಭ ಹಾರೈಸಿದರು.
ವಿದ್ಯಾರ್ಥಿಗಳಾದ 9ನೇ ತರಗತಿಯ ಅಪ್ರಮೇಯ ಆರ್. ಯು ಹಾಗೂ ಎಂಟನೇ ತರಗತಿಯ ವೈಷ್ಣವ್ ಕೆ. ಇವರು ವೈದ್ಯರ ದಿನಾಚರಣೆಯ ಕುರಿತಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಪವಿತ್ರ ಎಚ್. ಸ್ವಾಗತಿಸಿದರು ಹಾಗೂ ಶಿಕ್ಷಕಿ ಗಿರಿಜಾ ಕುಮಾರಿ ಎಮ್. ವಂದಿಸಿದರು. ಶಿಕ್ಷಕರಾದ ದೇವಿ ಪ್ರಸಾದ್ ಜಿ. ಸಿ. ಕಾರ್ಯಕ್ರಮ ನಿರೂಪಿಸಿದರು.