ಚೊಕ್ಕಾಡಿ ಶ್ರೀರಾಮ ದೇವಾಲಯದಲ್ಲಿ ಶನಿಶಾಂತಿ ಹೋಮ ಸಹಿತ ಸಾಮೂಹಿಕ ಶನೈಶ್ಚರ ಪೂಜೆ ಹಾಗೂ ಬಲಿವಾಡು ಕೂಟ

0

ಸಮಸ್ತ ಭಕ್ತ ಜನರ ಶನಿದೋಷ ಪರಿಹಾರ ಹಾಗೂ ಲೋಕಕಲ್ಯಾಣದ ಸಂಕಲ್ಪ

ಶ್ರೀಮಜ್ಜಗದ್ಗುರುಶಂಕರಾಚಾರ್ಯ, ಮಹಾಸಂಸ್ಥಾನಂ ಶ್ರೀಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಾಪುರ ಮಠ ಇದರ ಆಶ್ರಯದಲ್ಲಿ ಚೊಕ್ಕಾಡಿ ಶ್ರೀರಾಮ ದೇವಾಲಯದಲ್ಲಿ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪೂರ್ಣಾನುಗ್ರಹಗಳೊಂದಿಗೆ ಸಮಸ್ತ ಭಕ್ತ ಜನರ ಶನಿದೋಷ ಪರಿಹಾರ ಹಾಗೂ ಲೋಕಕಲ್ಯಾಣದ ಸಂಕಲ್ಪದೊಂದಿಗೆ ಶನಿಶಾಂತಿ ಹೋಮ ಸಹಿತ ಸಾಮೂಹಿಕ ಶನೈಶ್ಚರ ಪೂಜೆ ಹಾಗೂ ಬಲಿವಾಡು ಕೂಟ ಜು. 5ರಂದು ನಡೆಯಿತು.

ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಚೂಂತಾರು ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.