ಸ್ವರ್ಣ ಮಹಿಳಾ ಮಂಡಲ (ರಿ) ಕನಕಮಜಲು ಹಾಗೂ ಶ್ರೀ ಹರಿ ಗ್ರಾಮ ಮಟ್ಟದ ಸಂಜೀವಿನಿ ಸಂಘದ ಒಕ್ಕೂಟ ಇದರ ವತಿಯಿಂದ ಕೃಷಿ ಮಾಹಿತಿ ಕಾರ್ಯಾಗಾರ ಮತ್ತು ಅರೋಗ್ಯ ಮಾಹಿತಿ ಕಾರ್ಯಕ್ರಮವು ಕನಕಮಜಲಿನ ಶ್ರೀ ಆತ್ಮ ರಾಮ ಭಜನಾಮಂದಿರದ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಶ್ರೀಮತಿ ವಾರಿಜ ದಾಮೋದರ ಕೋಡ್ತಿಲು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಾರದಾ ಉಗ್ಗ ಮೂಲೆ ನೆರವೇರಿಸಿದರು. ಕು. ಪುಷ್ಪಾ ( ಹಿರಿಯ ಆರೋಗ್ಯ ಸಹಾಯಕಿ ಕನಕಮಜಲು ) ಇವರು ಆರೋಗ್ಯ ಮಾಹಿತಿ ನೀಡಿದರು. ತಾಳೆ ಕೃಷಿಯ ಬಗ್ಗೆ ಕೃಷ್ಣ ವೈ.ಟಿ.( ಏರಿಯಾ ಮ್ಯಾನೇಜರ್, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ, 3Fಆಯಿಲ್ ಫಾರ್ಮ್ ಪ್ರೈವೇಟ್ ಲಿಮಿಟೆಡ್ ) ಮತ್ತು ಕಾಫಿ ಬೆಳೆಯ ಮಾಹಿತಿಯನ್ನು ಶ್ರೀಮತಿ ಕಡ್ಲೆರ ತುಳಸಿ ಮೋಹನ್ ( ನಿರ್ದೇಶಕರು ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರಿ ಸಂಘ) ನೀಡಿದರು.















ಕಾಫಿ ಬೆಳೆಗಾರರಾದ ವಿನೋದ್ ಮೂಡಗದ್ದೆ, ( ಸದಸ್ಯರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ) ಕಾಫಿ ಬೆಳೆಯ ಅನುಭವದ ಬಗ್ಗೆ ಮಾಹಿತಿ ನೀಡಿದರು.
ಶ್ರೀಮತಿ ಶ್ವೇತಾ, ( ವ್ಯವಸ್ಥಾಪಕರು, ಸಂಜೀವಿನಿ ಒಕ್ಕೂಟ ಸುಳ್ಯ ) ಇವರು ಸಂಜೀನಿ ಸಂಘದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸುಳ್ಯ ತಾಲೂಕು 3Fಆಯಿಲ್ ಫಾರ್ಮ್ ಪ್ರೈ.
ಲಿಮಿಟೆಡ್ನ ಕ್ಲಸ್ಟರ್ ಆಫೀಸರ್ ರವಿಶಂಕರ್, ಸಂಜೀವಿನಿ ಒಕ್ಕೂಟದ ಗ್ರಾಮ ಪಂಚಾಯತ್ ಮಟ್ಟದ ಅಧ್ಯಕ್ಷರಾದ ಶ್ರೀಮತಿ ವಿಜಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ರೇಖಾ ಅಡ್ಕಾರ್ ಪ್ರಾರ್ಥಿಸಿದರು. ಶ್ರೀಮತಿ ಪ್ರೇಮ ಅಡ್ಕಾರ್ ಸ್ವಾಗತಿಸಿ, ಶ್ರೀಮತಿ ಶ್ಯಾಮಲಾ ಪೆರುಂಬಾರು ಇವರು ವಂದಿಸಿದರು. ಶ್ರೀಮತಿ ಸುಮತಿ ಕುತ್ಯಾಳ ಕಾರ್ಯಕ್ರಮ ನಿರೂಪಿಸಿದರು.










