ಬೀಡಿ,ಸಿಗರೇಟ್, ಗುಟ್ಕಾ ಮಾರಾಟ ನಾಳೆಯಿಂದಲೇ ನಿಷೇಧ

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯಾಪ್ತಿಯ ಅಂಗಡಿ ಕಟ್ಟಡಗಳ ಬಾಡಿಗೆದಾರರು ಹಾಗೂ ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ನಿಷೇಧ ಕುರಿತು ಮಾಹಿತಿ ನೀಡುವ ಸಭೆ ನಡೆಯಿತು. ದೇವಸ್ಥಾನದಲ್ಲಿ ಆ.14 ರ ಸಂಜೆ ನಡೆಯಿತು. ಬೀಡಿ ,ಸಿಗರೇಟ್ ಗುಟ್ಕಾ ಆ.15 ರಿಂದಲೇ ಸುಬ್ರಹ್ಮಣ್ಯದಲ್ಲಿ ಮಾರುವಂತಿಲ್ಲ ಎಂದು ಸಭೆ ತಿಳಿಸಲಾಯಿತು.

ಮುಂದಿನ ದಿನಗಳಲ್ಲಿ ಎಲ್ಲಾ ಅಂಗಡಿಗಳಿಗೆ ಪರಿಶೀಲನಾ ತಂಡ ಭೇಟಿ ನೀಡಿ, ಪ್ಲಾಸ್ಟಿಕ್ ಬಳಕೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಇರುವ ಪ್ಲಾಸ್ಟಿಕ್ ಮುಗಿಯುವ ವರೆಗೆ ಮಾರಾಟಕ್ಕೆ ಅಭ್ಯಂತರವಿಲ್ಲ ಆದರೆ ಇಲ್ಲಿ ಶಾಶ್ವತವಾಗಿ ಪ್ಲಾಸ್ಟಿಕ್ ಮಾರಟ ಮಾಡುವಂತಿಲ್ಲ ಎಂದು ಸಭೆಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮತ್ತು ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ತಿಳಿಸಿದರು.















ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಜಿತ್ ಕುಮಾರ್, ಶ್ರೀಮತಿ ಸೌಮ್ಯ ಭರತ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಪವನ್ ಎಂ.ಡಿ, ಲೋಲಾಕ್ಷ ಕೈಕಂಬ, ಕಡಬ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ, ಕಡಬ ತಾಲೂಕು ಕೆ.ಡಿ.ಪಿ ಸದಸ್ಯ ಶಿವರಾಮ ರೈ ,
ಸುಬ್ರಹ್ಮಣ್ಯ ಗ್ತಾ.ಪಂ ಪಿ.ಡಿ.ಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ, ಇಂಜಿನಿಯರ್ ಉದಯ ಕುಮಾರ್, ಯೋಗೀಶ್,
ಮಾದವ ದೇವರಗದ್ದೆ, ರವಿ ಕಕ್ಕೆಪದವು, ಗಣೇಶ್ ಪ್ರಸಾದ್, ಯಜ್ಞೇಶ್ ಆಚಾರ್, ಸುದರ್ಶನ ಜೋಯಿಸ, ಗೋಪಾಲ್ ಎಣ್ಣೆ ಮಜಲು, ರವೀಂದ್ರ ಸುಬ್ರಹ್ಮಣ್ಯ, ದೀಪಕ್ ನಂಬಿಯಾರ್, ರತ್ನಾವತಿ ನೂಚಿಲ, ನಿತಿಶ್, ಸಂತೋಪ್ , ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.










