
ಪೈಚಾರು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆ ಆ 15 ರಂದು ನಡೆಯಿತು.
ಸಂಘಟನೆಯ ಅಧ್ಯಕ್ಷರಾದ ರಿಫಾಯಿ ರವರು ದ್ವಜಾರೋಹಣ ನೆರೆವೆರಿಸಿದರು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭದ ಉದ್ಘಾಟನೆಯನ್ನು ಗ್ಯಾರಂಟಿ ಅನುಷ್ಠಾನ ಸಮಿತಿಯ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷರಾದ ಹಮೀದ್ ಕೂತಮೊಟ್ಟೆ ವಹಿಸಿದ್ದರು.















ಖ್ಯಾತ ಹಿರಿಯ ವೈದ್ಯರಾದ ಡಾ. ಶಂಕರ್ ಭಟ್,ನಿವೃತ್ತ ಹಿರಿಯ ಅಧ್ಯಾಪಕರಾದ ಸುಂದರ ಗೌಡ,ದೈಹಿಕ ಶಿಕ್ಷಣ ಶಿಕ್ಷಕರಾದ ರಘುನಾಥ್ ಹಾಗೂ ಪೈಚಾರಿನ ಮೆಸ್ಕಾಂ ಲೈನ್ ಮೆನ್ ಸಂತೋಷ್ ಎಮ್ ಇವರಿಗೆ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ನಿವೃತ್ತ ಪ್ರಾಂಶುಪಾಲರಾದ ಉಮ್ಮರ್ ಜಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಸುಳ್ಯ ನಗರ ಯೋಜನ ಪ್ರಾಧಿಕಾರದ (ಸೂಡ)ಅಧ್ಯಕ್ಷರಾದ ಮುಸ್ತಫ ಜನತಾ, ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಆರ್ತಾಜೆ, ಬದ್ರಿಯಾ ಜುಮ್ಮಾ ಮಸ್ಟಿದ್ ಪೈಚಾರ್ ಅಧ್ಯಕ್ಷರಾದ ಇಬ್ರಾಹಿಂ ಪಿ, ಶಾಂತಿನಗರ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ನಝೀರ್ ಶಾಂತಿನಗರ,ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಶೀರ್ ಆರ್.ಬಿ, ಅಲ್- ಅಮೀನ್ ಯೂತ್ ಸೆಂಟರ್ ಅಧ್ಯಕ್ಷ ಸತ್ತಾರ್ ಪಿ.ಎ, ಪಿ.ಎಂ ಕಾಂಪ್ಲೆಕ್ಸ್ ಮಾಲಕ ಮಧುಸೂದನ್, ನ್ಯಾಯವಾದಿ ಮೂಸಾ ಪೈಂಬಚ್ಚಾಲ್, ಹಿರಿಯ ಮೂಳುಗು ತಜ್ಞ ಲತೀಫ್ ಬಿ.ಎಲ್ ಮೊದಲಾದವರು ಉಪಸ್ಥಿತರಿದ್ದರು.

ಸಾರ್ವಜನಿಕರಿಗೆ ಸಂಘಟನೆಯ ವತಿಯಿಂದ ಊಟದ ವ್ಯವಸ್ಥೆ ಮಾಡಲಾಯಿತು.
ಸ್ಥಳೀಯ ಮುಖಂಡ ಬಶೀರ್ ಅರ್.ಬಿ ಸ್ವಾಗತಿಸಿ, ನಾಸೀರ್ ಕೆ.ಪಿ ವಂದಿಸಿದರು.










