ಕಂದ್ರಪ್ಪಾಡಿ ಯಿಂದ ಗುತ್ತಿಗಾರು ಸಂಪರ್ಕ ಕಲ್ಪಿಸುವ ಗೌರಿಗುಂಡಿಯ ತನಕ ರಸ್ತೆಯ ಇಕ್ಕೆಳಗಳಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ದೇವಚಳ್ಳ ಯುವಕ ಮಂಡಲದ ವತಿಯಿಂದ ಶ್ರಮದಾನ ಮಾಡುವ ಮೂಲಕ ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು.
















ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಉದಯಕುಮಾರ್ ಮುಂಡೋಡಿ, ಕಾರ್ಯದರ್ಶಿ ಪ್ರೀತಮ್ ಮುಂಡೋಡಿ ಹಾಗೂ ಸದಸ್ಯರು ಭಾಗವಹಿಸಿದ್ದರು.




