ವಿಶ್ವ ಹಿಂದು ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗವಾಹಿನಿ ಶಿವಾಜಿ ಶಾಖೆ ಅಜ್ಜಾವರ ಸುಳ್ಯ ಪ್ರಖಂಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನ ಅಜ್ಜಾವರ ಭಜನಾ ಪರಿಷತ್ತು ಅಜ್ಜಾವರ ವಲಯಗಳ ಸಹಯೋಗದೊಂದಿಗೆ ಭಜನಾ ತರಬೇತಿ ಮತ್ತು ಸಂಸ್ಕಾರ ವಾಹಿನಿ ಶಿಬಿರವು ಸೆ.23ರಿಂದ ಆರಂಭಗೊಂಡು ಸೆ.30ರ ತನಕ ನಡೆಯಲಿದೆ.
ನವರಾತ್ರಿ ಸಂದರ್ಭದಲ್ಲಿ ನಡೆಯುವ ಈ ಭಜನಾ ತರಬೇತಿ ಶಿಬಿರದ ಆಮಂತ್ರಣ ಪತ್ರಿಕೆಯನ್ನ ಸೆ.7ರಂದು ಮಹಿಷಮರ್ದಿನಿ ದೇವಸ್ಥಾನ ಅಜ್ಜಾವರದಲ್ಲಿ ನಡೆಸಲಾಯಿತು.















ಈ ಸಂದರ್ಭ ಪ್ರಖಂಡ ಅಧ್ಯಕ್ಷರಾದ ಶ್ರೀಕಾಂತ್ ಗೋಳ್ವಾಲ್ಕರ್ ಮತ್ತು ಪ್ರಖಂಡದ ಎಲ್ಲ ಪ್ರಮುಖರು , ಶ್ರೀ ಮಹಿಷಮರ್ದಿನಿ ದೇವಸ್ಥಾನದ ಧರ್ಮದರ್ಶಿಗಳಾದ ಎ.ಭಾಸ್ಕರ್ ರಾವ್ ಬಯಂಬು ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಭಜನಾ ಪರಿಷತ್ತು ಅಜ್ಜಾವರ ವಲಯ ಇದರ ಪದಾಧಿಕಾರಿಗಳು ಪ್ರಮುಖ ಸದಸ್ಯರಾದ ಕೃಷ್ಣಯ್ಯ ಕನ್ಯಾನ ಮಂಡೆಕೋಲು ಶಿಬಿರ ಅಧಿಕಾರಿ ರಾಜೇಶ್ ಶೆಟ್ಟಿ ಮೇನಾಲ, ಮತ್ತು ಸಿ ಬ್ಯಾಂಕ್ ಅಧ್ಯಕ್ಷರಾದ ವಿಕ್ರಂ ಅಡ್ಪಂಗಾಯ, ಸಿ ಎ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಸುಭೋದ್ ಶೆಟ್ಟಿ ಮೇನಾಲ, ಶಿವಾಜಿ ಶಾಖೆ ಅಧ್ಯಕ್ಷರಾದ ಸೀತಾರಾಮ ಕರ್ಲಪ್ಪಾಡಿ, ಕಾರ್ಯದರ್ಶಿಯಾದ ಪ್ರಬೋದ್ ಶೆಟ್ಟಿ ಮೇನಾಲ, ಸಂಚಾಲಕರಾದ ಅನಿಲ್ ರಾಜ್ ಕರ್ಲಪ್ಪಾಡಿ, ಮಾತೃಶಕ್ತಿ ಪ್ರಮುಖರಾದ ಶ್ರೀಮತಿ ಮಮತಾ ಪೃಥ್ವಿರಾಜ್ ಮೇನಾಲ, ದುರ್ಗಾವಾಹಿನಿ ಪ್ರಮುಖರಾದ ಶ್ರೀಮತಿ ರಮ್ಯಾ ಭವಾನಿಶಂಕರ ಶಿರ್ವಾಜೆ ಮತ್ತು ಮಾತೃ ಶಕ್ತಿ ದುರ್ಗ ವಾಹಿನಿ ಎಲ್ಲಾ ಪ್ರಮುಖರು ಉಪಸ್ಥಿತರಿದ್ದರು. ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










