














ಬೆಳ್ಳಾರೆ ಸ್ನೇಹಿತರ ಕಲಾ ಸಂಘದ 2024-2025ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. 9ರಂದು ಸಂಘದ ಸಭಾಂಗಣ ಸ್ನೇಹ ಸದನದಲ್ಲಿ ಜರುಗಿತು.
ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಗಣೇಶ್ ಪಾಟಾಳಿ ಕುರುಂಬುಡೇಲು ಮತ್ತು ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಶ್ರೀನಿವಾಸ ಕುರುoಬುಡೇಲು ಮಂಡಿಸಿದರು. ಬಳಿಕ, ಗತ ವರ್ಷದ ಕಾರ್ಯಕ್ರಮದ ಅವಲೋಕನ ನಡೆಸಲಾಯಿತು. 2025-2026 ಸಾಲಿಗೆ ಯೋಜಿಸಿದ ನೂತನ ಕಾರ್ಯಕ್ರಮವನ್ನು ಅಂಗೀಕರಿಸಲಾಯಿತು. 2025-26ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವಸಂತ ಗೌಡ ಪಡ್ಪು, ಕಾರ್ಯದರ್ಶಿಯಾಗಿ ಗಣೇಶ್ ಪಾಟಾಳಿ ಕುರುoಬುಡೇಲು, ಉಪಾಧ್ಯಕ್ಷರಾಗಿ ಶ್ರೀನಿವಾಸ ಕುರುoಬುಡೇಲು, ಕೋಶಾಧಿಕಾರಿಯಾಗಿ ಬಾಲಕೃಷ್ಣ ಪೂಜಾರಿ ತಡಗಜೆ, ಜತೆ ಕಾರ್ಯದರ್ಶಿಯಾಗಿ ಸನತ್ ಗೌಡ ಕಲ್ಲೋಣಿ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಹಾಲಿಂಗ ಪಾಟಾಳಿ ಕುರುoಬುಡೇಲು, ನಿಕಟಪೂರ್ವಧ್ಯಕ್ಷರಾಗಿ ಪದ್ಮನಾಭ ಬೀಡು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಜನಾರ್ಧನ ಪೂಜಾರಿ ಚೀಮುಳ್ಳು, ಸತೀಶ್ ಕುಮಾರ್ ಕಿಲoಗೋಡಿ, ತೀರ್ಥರಾಮ ಗೌಡ ಗುಡ್ಡೆಮನೆ, ಬಾಲಕೃಷ್ಣಪೂಜಾರಿ ಚೀಮುಳ್ಳು, ವಿಜಯ್ ಕೂಡಣಕಟ್ಟೆ, ಚೆನ್ನಪ್ಪ ಕಾವಿನಮೂಲೆಯವರನ್ನು ಆಯ್ಕೆ ಮಾಡಲಾಯಿತು, ಶ್ರೀನಿವಾಸ ಕುರುoಬುಡೇಲು ಸ್ವಾಗತಿಸಿ, ಮಹಾಲಿಂಗ ಪಾಟಾಳಿ ಕುರುಂಬುಡೇಲು ವಂದಿಸಿದರು. ವಸಂತ ಗೌಡ ಪಡ್ಪು ಕಾರ್ಯಕ್ರಮ ನಿರೂಪಿಸಿದರು.










