ಕುಕ್ಕೆ ಶ್ರೀ ಸುಬ್ರಹ್ಮಣ್ಯದ 40 ಸೇವೆಗಳ ದರ ಪರಿಷ್ಕರಣೆ

0

15 ವರ್ಷಗಳ ಹಿಂದಿನ ದರ ಇತ್ತು, ನಿರ್ವಹಣಾ ಶುಲ್ಕ ಸರಿದೂಗಿಸಲು ಪರಿಷ್ಕರಣೆ : ಹರೀಶ್ ಇಂಜಾಡಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಿವಿಧ ಸೇವೆಗಳ ದರಗಳಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಪರಿಷ್ಕೃತ ದರ ಸೆ. 1ರಿಂದಲೇ ಜಾರಿಗೆ ಬಂದಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಾಯವನ್ನು ಹೆಚ್ಚಿಸುವ ದೃಷ್ಟಿಯಿಂದ ದೇವಸ್ಥಾನದಲ್ಲಿ ನಷ್ಟದಲ್ಲಿ ನಡೆಯುವ ಕೆಲವು ಪ್ರಮುಖ ಸೇವೆಗಳ ಸೇವಾ ದರವನ್ನು ಹೆಚ್ಚಿಸಿ ಪರಿಷ್ಕರಿಸುವ ಅಗತ್ಯವಿರುವುದರಿಂದ, ಸೇವಾದರ ಪರಿಷ್ಕರಣೆ ಹಾಗೂ ದಕ್ಷಿಣೆ ದರ ಪರಿಷ್ಕರಣೆಗೆ ಈ ಹಿಂದಿನ ಆಡಳಿತಾಧಿಕಾರಿ ಅವರು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇಲಾಖೆಗೆ ಸಲ್ಲಿಸಿದ ವಿವಿಧ ಸೇವೆಗಳ ಪರಿಷ್ಕರಣೆಗಳಲ್ಲಿ ಸುಮಾರು 40 ರಷ್ಟು ಸೇವೆಗಳ ದರ ಹೆಚ್ಚಳಗೊಂಡು ಪರಿಷ್ಕರಣೆ ಆಗಿದೆ. ಪರಿಷ್ಕರಣೆಯನ್ನು ಮುಂದಿನ ಅವಧಿಗೆ ಜಾರಿಗೊಳಿಸುವಂತೆ ಇಲಾಖೆಯ ಆಯುಕ್ತರು ಆದೇಶಿಸಿದಂತೆ ಪರಿಷ್ಕರಣೆ ದರ ಜಾರಿಗೆ ಬಂದಿದೆ. ಈ ಹಿಂದೆ 2010ರ ನವೆಂಬರ್ ನಲ್ಲಿ ಕೊನೆಗೆ ಪರಿಷ್ಕರಣೆ ಮಾಡಲಾಗಿತ್ತು. ಇದೀಗ 15 ವರ್ಷದ ಬಳಿಕ ಸೇವೆಗಳ ದರ ಪರಿಷ್ಕರಣೆ ಗೊಂಡಿರುವುದಾಗಿ ತಿಳಿದು ಬಂದಿದೆ

ಪರಿಷ್ಕರಣೆಗೊಂಡ ಸೇವೆಗಳು:
ಪರಿಷ್ಕರಣೆಗೊಂಡು ಹೆಚ್ಚಳಗೊಂಡ ಸೇವೆಗಳ ದರ ಈ ರೀತಿ ಇದೆ. ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನಡೆಯುವ ಚಿಕ್ಕರಥೋತ್ಸವ ಪರಿಷ್ಕರಣೆ ದರ ರೂ.12,000, ಚಂದ್ರಮಂಡಲ ಉತ್ಸವ ರೂ.9,500, ಹೂವಿನ ತೇರಿನ ಉತ್ಸವ ರೂ.8,700, ರಾಜಾಂಗಣದಲ್ಲಿ ಶೇಷ ವಾಹನಯುಕ್ತ ಭಂಡಿ ಉತ್ಸವ ರೂ.4,500, ದೀಪಾರಾಧನೆಯುಕ್ತ ಪಾಲಕಿ ಉತ್ಸವ ರೂ.5,600, ಪಾಲಕಿ ಉತ್ಸವಯುಕ್ತ ಮಹಾಪೂಜೆ ರೂ. 4,000, ಇಡೀ ದಿನದ ಸಪರಿವಾರ ಸೇವೆ ರೂ.4,050, ಪವಮಾನಯುಕ್ತ ಪಂಚಾಮೃತ ಅಭಿಷೇಕ ರೂ.160, ಕಲಶ ಪೂಜಾಯುಕ್ತ ಪಂಚಾಮೃತ ಅಭಿಷೇಕ ರೂ.160, ಪಂಚಾಮೃತಾಭಿಷೇಕ ರೂ.100, ರುದ್ರಾಭಿಷೇಕ ರೂ.100, ಶೇಷ ಸೇವೆ (ಅಷ್ಟೋತ್ತರ ಸಹಿತ) ರೂ.160, ಹರಿವಾಣ ನೈವೇದ್ಯ ರೂ.125, ಕಾರ್ತಿಕ ಪೂಜೆ ರೂ.100, ಚಿತ್ರಾನ್ನ ಸಮರ್ಪಣೆ ರೂ.200, ಹಾಲು ಪಾಯಸ ರೂ.160, ಸಹಸ್ರನಾಮಾರ್ಚನೆ ರೂ.25, ಮೃಷ್ಠಾನ್ನ ಸಮರ್ಪಣೆ ರೂ.925, ರಾತ್ರಿ ಮಹಾಪೂಜೆಯುಕ್ತ ಪಾಲಕಿ ಉತ್ಸವ ರೂ.4,600, ಹರಿಕೆಗಳಾದ ನಾಗ ಪ್ರತಿಷ್ಠೆ ರೂ.500, ನಾಮಕರಣ ರೂ.250, ಅಶ್ಲೇಷ ಬಲಿ ರೂ.500, ಆಶ್ಲೇಷ ಬಲಿ ಉದ್ಯಾಪನೆ ರೂ.500, ಷಷ್ಠಿವೃತ ಉದ್ಯಾಪನೆ ರೂ.500, ಮಂಗಳ ಕಾರ್ಯಗಳಾದ ಉಪನಯನ (ಬ್ರಹ್ಮಪ್ರತಿಷ್ಠೆ) ರೂ.800, ಸತ್ಯನಾರಾಯಣ ಪೂಜೆ ರೂ.1000, ಲಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಏಕದಶಾವಾರ. ರುದ್ರಾಭಿಷೇಕ ರೂ.120, ಪಂಚಾಮೃತಾಭಿಷೇಕ ರೂ.100, ಹರಿವಾಣ ನೈವೇದ್ಯ ರೂ.150, ಕಾರ್ತಿಕ ಪೂಜೆ ರೂ.100, ಸಹಸ್ರನಮಾರ್ಚನೆ ರೂ.20, ಶ್ರೀ ಕುಕ್ಕೆಲಿಂಗ ದೇವರ ಸನ್ನಿಧಿಯಲ್ಲಿ ಏಕದಶಾವಾರ ರುದ್ರಾಭಿಷೇಕ ರೂ.120, ತ್ರಿಮಧುರ ಸಮರ್ಪಣೆ ರೂ.50, ಕಾರ್ತಿಕ ಪೂಜೆ ರೂ.100, ಶ್ರೀ ಆದಿ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ರೂ.100, ರಂಗಪೂಜೆ ರೂ.850, ತ್ರಿಮಧುರ ಸಮರ್ಪಣೆ ರೂ.50, ಕಾರ್ತಿಕ ಪೂಜೆ ರೂ.100, ಹೊಸಳಿಗಮ್ಮನ ಸನ್ನಿಧಿಯಲ್ಲಿ ಪುರುಷರಾಯನಿಗರ ಒಂಟಿನೇಮ ರೂ.2,500, ಕಾಶಿಕಟ್ಟೆ ಗಣಪತಿ ದೇವರ ಸನ್ನಿಧಿಯಲ್ಲಿ ರಂಗಪೂಜೆ ರೂ.850, ಶ್ರೀ ಅಭಯ ಆಂಜನೇಯ ದೇವರ ಸನ್ನಿಧಿಯಲ್ಲಿ ಸತ್ಯನಾರಾಯಣ ಪೂಜೆ ರೂ.900 ದರಗಳ ಪರಿಷ್ಕರಣೆ ಗೊಂಡಿದೆ.
ಪರಿಷ್ಕರಣೆ ಗೊಂಡ ಸೇವೆಗಳ ದರಗಳಲ್ಲಿ ಕೆಲವುದರಲ್ಲಿ ಸ್ವಲ್ಪ ಮಟ್ಟಿನ ಪರಿಷ್ಕರಣೆ ಆಗಿದ್ದು, ಕೆಲ ಸೇವೆಗಳ ದರದಲ್ಲಿ ಅಧಿಕ ದರದ ಹೆಚ್ಚಳಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

15 ವರ್ಷಗಳ ಹಿಂದಿನ ದರ, ಇತ್ತು ನಿರ್ವಹಣಾ ಶುಲ್ಕ ಸರಿದೂಗಿಸಲು ಪರಿಷ್ಕರಣೆ

ಸೇವೆಗಳಿಗೆ ಬಳಸುವ ಸುವಸ್ತುಗಳ ದರಗಳು ಹೆಚ್ಚಳಗೊಂಡಿದೆ. ಕೆಲವು ಸೇವೆಗಳು ನಷ್ಟದಲ್ಲಿ ನಡೆಯುತ್ತಿದ್ದವು. ಆ ಕಾರಣಕ್ಕಾಗಿ ಈ ಹಿಂದಿನ ಆಡಳಿತಾಧಿಕಾರಿ ಅವರು ಸೇವೆಗಳ ದರಗಳಲ್ಲಿ ಪರಿಷ್ಕರಣೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ಕೆಲ ಸೇವೆಗಳ ದರಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ. ಕಳೆದ 15 ವರ್ಷಗಳಲ್ಲಿ ಸೇವೆಗಳ ದರ ಪರಿಷ್ಕರಣೆ ನಡೆದಿರಲಿಲ್ಲ. ನಿರ್ವಹಣಾ ಶುಲ್ಕ ಸರಿದೂಗಿಸಲು ಪರಿಷ್ಕರಣೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದೀಗ ಅನುಮೋದನೆಗೊಂಡು ಜಾರಿಯಾಗಿದೆ. ಭಕ್ತರಿಂದ ಯಾವುದೇ ಆಕ್ಷೇಪಣೆ ಬಂದಿಲ್ಲ. ಈ ಬಗ್ಗೆ ಯಾವುದೇ ಅಪಪ್ರಚಾರವು ಬೇಡ ಆಡಳಿತಾಧಿಕಾರಿ ಇದ್ದಾಗಲೇ ಪ್ರಸ್ತಾಪ ಹೋಗಿತ್ತು. ಈಗ ಅನುಮೋದನೆ ದೊರೆತು ಜಾರಿಯಾಗಿದೆಯಷ್ಟೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮಾದ್ಯಮದ ಮುಂದೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.