ಸುಳ್ಯ ಅನ್ಸಾರ್ ನಲ್ಲಿ ಮುಸ್ಲಿಂ ಸಮಾಜದ ಮುಖಂಡರು ಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಸಮಾಲೋಚನಾ ಸಭೆ

0

ಧರ್ಮ ಇಸ್ಲಾಂ ಎಂದೂ, ಜಾತಿ ಮುಸ್ಲಿಂ ಎಂದೂ, ಭಾಷೆ ಬ್ಯಾರಿ ಎಂದೂ ನಮೂದಿಸಲು ಸಲಹೆ

ಮಹತ್ವದ ಈ ಸಮೀಕ್ಷೆ ಯಿಂದ ಯಾರೊಬ್ಬರೂ ಹೊರಗುಳಿಯದಂತೆ ಜಾಗೃತಿ ಮೂಡಿಸಬೇಕಾಗಿದೆ : ಉಮರ್ ಯು.ಎಚ್.

ಸೆಪ್ಟೆಂಬರ್ 22 ರಿಂದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುವ ಪ್ರತೀ ಕುಟುಂಬಗಳ ಜಾತಿ ಗಣತಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಯ ಬಗ್ಗೆ ಮುಸ್ಲಿಂ ಸಮಾಜದಲ್ಲಿ ಜಾಗೃತಿ, ಅರಿವು ಮೂಡಿಸುವ ಉದ್ದೇಶದಿಂದ ಮತ್ತು ಸಮೀಕ್ಷೆಯ ವೇಳೆ ಕೇಳಲಾಗುವ 60 ಪ್ರಶ್ನೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ನಲ್ಲಿ ಸೆ.20 ರಂದು ನಡೆಯಿತು.
ಕರ್ನಾಟಕ ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು. ಎಚ್. ಸಭೆಯಲ್ಲಿ ಭಾಗವಹಿಸಿದ್ದರು.

ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್. ಮಾತನಾಡಿ
” ಮುಸ್ಲಿಮರು ಯಾವುದೇ ಗೊಂದಲಕ್ಕೆ ಒಳಗಾಗದೆ ಮಾಹಿತಿಯನ್ನು ನೀಡಿ ಈ ಸಮಗ್ರ ಸಮೀಕ್ಷೆ ಯಲ್ಲಿ ಭಾಗವಹಿಸಬೇಕು. ಇದು ಎನ್.ಆರ್.ಸಿ. ಸಮೀಕ್ಷೆಯ ಹಾಗಲ್ಲ. ಇದು ಇತಿಹಾಸದಲ್ಲಿಯೇ ಅತ್ಯಮೂಲ್ಯ ಮತ್ತು ಐತಿಹಾಸಿಕ ಸಮೀಕ್ಷೆ. ಇದರಲ್ಲಿ ದೊರೆಯುವ ಅಂಕಿಅಂಶಗಳ ಆಧಾರದಲ್ಲಿ ನಮ್ಮ ಸಮಾಜಕ್ಕೆ ಸವಲತ್ತುಗಳನ್ನು ಕೊಡುವ ಯೋಜನೆಗಳನ್ನು ಮುಂದಿನ ಸರಕಾರಗಳು ರೂಪಿಸುತ್ತವೆ. ಧರ್ಮ ಇಸ್ಲಾಂ, ಜಾತಿ ಮುಸ್ಲಿಂ ಎಂಬುದಾಗಿ ಎಲ್ಲರೂ ಕಡ್ಡಾಯವಾಗಿ ನಮೂದಿಸಬೇಕು. ಉಳಿದಂತೆ ಉಪ ಜಾತಿ ಕಾಲಂ ನಲ್ಲಿ ಬ್ಯಾರಿ ಮುಸ್ಲಿಂ ಎಂಬುದಾಗಿ ನಮೂದಿಸಿದರೆ ಬ್ಯಾರಿ ಜನಾಂಗದ ಸಂಖ್ಯೆ ಆಧರಿಸಿ, ಸವಲತ್ತುಗಳು ಸಿಗಲು ಅನುಕೂಲವಾಗುತ್ತದೆ. ಮಾತೃ ಭಾಷೆ ಬ್ಯಾರಿ ಎಂದು ನಮೂದಿಸಿದರೆ ಒಳ್ಳೆಯದು. ಒಂದು ವೇಳೆ ಮಾತೃ ಭಾಷೆ ಕಾಲಂ ಬರೆಯದಿದ್ದರೂ ತೊಂದರೆಯಿಲ್ಲ.

ಪ್ರಾರಂಭ ದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ.ಎಂ.ಮುಸ್ತಫ ಮಾತನಾಡಿ ” ಈ ಸಮೀಕ್ಷೆ ಮಹತ್ವದ್ದಾಗಿದ್ದು, ಯಾರೂ ನಿರ್ಲಕ್ಷ್ಯ ಮಾಡಬಾರದು. ದಸರಾ ರಜೆ ಇರುವುದರಿಂದ ಸಮೀಕ್ಷೆ ಮುಗಿಸಿಯೇ ಎಲ್ಲಿಗೆ ಹೋಗುವುದಿದ್ದರೂ ಹೋಗಿ. ನಿಮ್ಮ ಇತರ ಮಾಹಿತಿಗಳನ್ನು ಏನು ಕೊಟ್ಟರೂ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುವ ಯಾರಿಗೂ ಇದರಿಂದ ತೊಂದರೆಯಾಗುವುದಿಲ್ಲ ” ಎಂದರು.


ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಸಮಾಜದ ಪ್ರಮುಖರುಗಳಾದ ಹಾಜಿ ಕೆ.ಎo.ಎಸ್.ಮಹಮ್ಮದ್ ಬಾರ್ಪಣೆ, ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಹಾಗೂ ನ.ಪಂ.ಸದಸ್ಯ ಕೆ.ಎಸ್.ಉಮ್ಮರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಶರೀಫ್ ಬಾಳಿಲ, ಇಬ್ರಾಹಿಂ ಹಾಜಿ ಕತ್ತಾರ್, ಪಿ.ಎ.ಮಹಮ್ಮದ್, ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಜಿ.ಕೆ.ಹಮೀದ್ ಸಂಪಾಜೆ, ಅನ್ಸಾರ್ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಅಬೂಬಕ್ಕರ್ ಅಡ್ವೋಕೇಟ್, ಅಬ್ದುಲ್ ಖಾದರ್ ಕಲ್ಲುಗುಂಡಿ, ಅಬ್ಬಾಸ್ ಗುತ್ತಿಗಾರು, ಇಲ್ಯಾಸ್ ಕಾಶಿಪಟ್ಟಣ, ಶಾಫಿ ಕುತ್ತಮೊಟ್ಟೆ, ನ.ಪಂ.ಸದಸ್ಯರುಗಳಾದ ಶರೀಫ್ ಕಂಠಿ ಮತ್ತು ರಿಯಾಜ್ ಕಟ್ಟೆಕ್ಕಾರ್ಸ್, ಅಶ್ರಫ್ ಗುಂಡಿ ಅರಂತೋಡು, ತಾಜ್ ಮಹಮ್ಮದ್ ಕಲ್ಲುಗುಂಡಿ, ಎ.ಕೆ.ಹಾಜಿ ಕುಂಭಕ್ಕೋಡ್, ಎಸ್.ಕೆ.ಹನೀಫ್ ಸಂಪಾಜೆ, ರಶೀದ್ ಜಟ್ಟಿಪ್ಪಳ್ಳ, ಇಬ್ರಾಹಿಂ ಜಯನಗರ, ಫೈಝಲ್ ಕಟ್ಟೆಕ್ಕಾರ್ಸ್, ಇಸ್ಮಾಯಿಲ್ ಪಡ್ಪಿನಂಗಡಿ, ಅಬೂಬಕ್ಕರ್ ಸಿದ್ದೀಕ್ ಎಣ್ಮೂರ್, ಕೆ.ಎಚ್.ಮಹಮ್ಮದ್ ಪಂಜ, ಇಕ್ಬಾಲ್ ಸುಣ್ಣಮೂಲೆ ಕನಕಮಜಲು, ಮಹಮ್ಮದ್ ಇರ್ಷಾದ್ ಕಲ್ಲುಗುಂಡಿ, ಅಮೀರ್ ಕುಕ್ಕುಂಬಳ ಆರಂತೋಡು, ಸಿದ್ದಿಕ್ ಸುಳ್ಯ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.