ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಇದರ ಮಹಾಸಭೆ ಹಾಗೂ ಸುಳ್ಯದ ಹಿರಿಯ ವರ್ತಕರಿಗೆ ಸನ್ಮಾನ ಕಾರ್ಯಕ್ರಮ ಸೆ.23 ಮಂಗಳವಾರದಂದು ಮಧ್ಯಾಹ್ನ 3-30ಕ್ಕೆ “ವರ್ತಕ ಸಮುದಾಯ ಭವನ” ಅಂಬಟೆಡ್ಕ, ಸುಳ್ಯದಲ್ಲಿ ನಡೆಯಲಿದೆ.















ಸುಳ್ಯದಲ್ಲಿ ವಾಣಿಜ್ಯ ವ್ಯಾಪಾರೋದ್ಯಮ & ಕೈಗಾರಿಕೋದ್ಯಮದಲ್ಲಿ ಹಲವು ವರ್ಷಗಳ ಸೇವೆ ಸಾಧನೆಯನ್ನು ಮಾಡಿದಂತಹ ಶ್ರೀ ವೆಂಕಟೇಶ್ ಪ್ರಭು,ಕೆ. (ಸುಬ್ಬಯ ಪ್ರಭು ಸನ್ಸ್), ಶ್ರೀ ರಾಮಚಂದ್ರ ಯಮ್ ( ಡಿ ಆರ್ ಗಾರ್ಮೆಂಟ್ಸ್) ಕಸ್ತೂರಿಶಂಕರ್, (ನಿಸರ್ಗ ಮಸಾಲೆ) ಗೋಪಾಲಕೃಷ್ಣ ಪ್ರಭು ಜಾಲ್ಸೂರು, ಟಿ. ವಿಜಯಕುಮಾರ್, (ವಿನ್ಯಾಸ್ ಕನ್ಸಲ್ವೆನ್ಸಿ), ಯಸ್. ಆರ್. ಸೂರಯ್ಯ, (ವಿಶ್ವಾಸ್ ಸ್ಟೋರ್), ಅಬ್ದುಲ್ ಮಜೀದ್, (ಜನತಾ ಗ್ರೂಪ್), ಕಮಿಲ ಸುರೇಶ್ಚಂದ್ರ, (ಕಮಿಲ ಇಂಡಸ್ಟ್ರೀಸ್), ಬಿ. ಅಬ್ಬಾಸ್, (ಸನ್ರೇ ಗಾರ್ಮೆಂಟ್ಸ್), ಉಮ್ಮ ರ್ ಹಾಜಿ , (ಹೋಟೆಲ್ ಮೆಟ್ರೋ ಗಾಂಧಿನಗರ) ಇವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ ತಿಳಿಸಿದ್ದಾರೆ .










