ಆಲೆಟ್ಟಿ ಗ್ರಾಮದ ಅರಂಬೂರಿನ ಮಜಿಗುಂಡಿ ನಿವಾಸಿ ದಿ. ನಾರಾಯಣ ಭಟ್ ರವರ ಧರ್ಮಪತ್ನಿ ಶ್ರೀಮತಿ ತಿರುಮಲೇಶ್ವರಿ ಯವರು ಸೆ. 25 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.















ಮೃತರು ಪುತ್ರರಾದ ಆಲೆಟ್ಟಿ ಪಂಚಾಯತ್ ಮಾಜಿ ಸದಸ್ಯ ಉದಯ ನಾರಾಯಣ ಭಟ್ ಮಜಿಗುಂಡಿ ಮತ್ತು ಆಲೆಟ್ಟಿ ಸೊಸೈಟಿ ಮಾಜಿ ನಿರ್ದೇಶಕ ಗಣಪತಿ ಭಟ್ ಮಜಿಗುಂಡಿ, ಸೊಸೆಯಂದಿರಾದ ಶ್ರೀಮತಿ ಶ್ರೀದೇವಿ, ಶ್ರೀಮತಿ ಈಶ್ವರಿ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಕಾರ್ಯಕ್ರಮ ಸೆ. 26 ರಂದು ಬೆಳಗ್ಗೆ 11 ಗಂಟೆಗೆ ಮಾಡುವುದಾಗಿ ಮನೆಯವರು
ತಿಳಿಸಿರುತ್ತಾರೆ.










