ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಕ್ಕೊಳಪಟ್ಟ ಶ್ರೀ ವನದುರ್ಗಾದೇವಿ ದೇವಸ್ಥಾನದಲ್ಲಿ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ ಶರನ್ನವರಾತ್ರಿ ಉತ್ಸವ ಸೆ. 22 ರಿಂದ ನಡೆಯುತಿದ್ದು ದಿನಂಪ್ರತಿ ಭಜನಾ ಕಾರ್ಯಕ್ರಮ, ವೈವಿಧ್ಯಮಯ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿದೆ.















ಸೆ.22 ರ ಸಂಜೆ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ ದೀಪ ಬೆಳಗಿಸಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ಭಜನೆ ನಡೆದು. ಬಳಿಕ ಡ್ಯಾನ್ಸ್ & ಬೀಟ್ಸ್ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನಡೆಯಿತು. ಸೆ. 23 ರ ಸಂಜೆ ಭಜನೆ, ಬಳಿಕ ರಾತ್ರಿ ಸಾಯಿಕಲಾ ಯಕ್ಷ ಬಳಗ ಡಾl ಶಿವರಾಮ ಕಾರಂತ ಬಾಲವನ ಪುತ್ತೂರು ಇವರಿಂದ ಯಕ್ಷಗಾನ” ಕದಂಬ ಕೌಶಿಕೆ ನಡೆಯಿತು. ಸೆ. 24 ರ ಸಂಜೆ ಭಜನೆ, ಬಳಿಕ ಕ್ರೀಮ್ ರೋನ್ ಡಾನ್ಸ್ ಕ್ರಿವ್ ಬೆಳ್ತಂಗಡಿ ಇವರಿಂದ ನೃತ್ಯ ನೂತನ ನಡೆಯಿತು. ಸೆ. 25 ರ ಸಂಜೆ ಭಜನೆ, ಬಳಿಕ ರಾತ್ರಿ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪುತ್ತೂರು ಇವರಿಂದ ಯಕ್ಷಗಾನ ನಡೆಯಿತು.
ಸೆ.26 ರ ಸಂಹೆ ಭಜನೆ ನಡೆದು ಬಳಿಕ ಅಮ್ಮ ಡ್ರಮ್ಸ್ ಮೆಲೊಡೀಸ್ ಅಂಬಲಪಾಡಿ ಉಡುಪಿ ಇವರಿಂದ “ಭಕ್ತಿ ಗೀತಾ ಗಾಯನ” ನಡೆಯಿತು. ಸೆ. 27 ಸಂಜೆ ಕುಣಿತ ಭಜನೆಯ ಬಳಿಕ ಕವಿತಾ ಉಮೇಶ್ ಈಶ ಕಲಾ ಪ್ರತಿಷ್ಠಾನ ಬೆಳಾಲು ವಿದ್ಯಾರ್ಥಿಗಳಿಂದ ವಿನೂತನ “ನೃತ್ಯ ವೈಭವ” ನಡೆಯಿತು ಸೆ. 28ರ ಸಂಜೆ ಭಜನೆಯ ಬಳಿಕ ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಇವರ ಸುಬ್ರಹ್ಮಣ್ಯ ಶಾಖೆ ಪ್ರಸ್ತುತಪಡಿವಸುವ “ನೃತ್ಯೋಹಂ” ನಡೆಯಿತು. ಸೆ. 29 ರ ಸಂಜೆ ದು ಭಜನೆಯ ಬಳಿಕ ದಯಾಪದ ಕಲಾವಿದೆರ್ ಉಬರ್ ಅಭಿನಯಿಸುವ “ನಾಗ ಮಾಣಿಕ್ಯ” ನಾಟಕ ನಡೆಯಲಿದೆ. ಸೆ. 30 ರ ಸಂಜೆ ಭಜನೆಯ ಬಳಿಕ ಯಜ್ಞೇಶ್ ಆಚಾರ್ ಮತ್ತು ಬಳಗದ ಇವರಿಂದ “ಭಕ್ತಿ ಸಂಗೀತ” ನಡೆಯಲಿದೆ. ಅ.1ರ ಸಂಜೆ 4.00 ರಿಂದ ಭಜನೆ, ಬಳಿಕ ಬಡಗುತಿಟ್ಟಿನ ಹೆಸರಾಂತ ಕಲಾವಿದರಿಂದ “ಹಾಸ್ಯ ಸಂಗಮ” ನಡೆಯಲಿದೆ. ರಾತ್ರಿ ಕಾರ್ಯಕ್ರಮದ ಬಳಿಕ ಪ್ರತಿದಿನ ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತಿದೆ.










