ಇಂದು (ಅ.1): ಆಯುಧ ಪೂಜೆ- ಭಜನಾ ಸಂಕೀರ್ತನೆ – ಕೊಳಲು ವಾದನ
ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇಗುಲದಲ್ಲಿ ಅ. 1ರ ತನಕ ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಪ್ರತಿ ದಿನ ಬೆಳಿಗ್ಗೆ ಮಹಾಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ 6.30 ರಿಂದ 7.45ರ ತನಕ ಭಜನಾ ಸಂಕೀರ್ತನೆ ,ರಾತ್ರಿ 8ಕ್ಕೆ ಮಹಾಪೂಜೆ, 8.10ರಿಂದ 8.30ರ ತನಕ ಕಲಾ ಸೇವೆ ನಡೆಯಲಿದೆ.















.
ಸೆ.30ರಂದು ಶಿವಳ್ಳಿ ಸಂಪದ ಪಂಜ ವಲಯ ಇವರಿಂದ ಭಜನಾ ಸಂಕೀರ್ತನೆ. ವಿದುಷಿ ಮಾನಸ ಪುನೀತ್ ರೈ ಅವರ ಶಿಷ್ಯೆ ಆದ್ಯಾ ಬಾಬ್ಲುಬೆಟ್ಟು ಮತ್ತು ಸ್ನೇಹ ಪಿ. ರಾವ್ ಇವರಿಂದ ಭರತನಾಟ್ಯ ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಗೌರವ ಸಲಹೆಗಾರರು , ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.
ಅ.1ರಂದು ಆಯುಧ ಪೂಜೆ, ಯುವ ಸ್ಫೂರ್ತಿ ಕಲ್ಮಡ್ಕ ಇವರಿಂದ ಭಜನಾ ಸಂಕೀರ್ತನೆ, ಎ. ಕೆ. ಮೇಘನ್ ಆರ್ನೋಜಿ ಇವರಿಂದ ಕೊಳಲು ವಾದನ ನಡೆಯಲಿದೆ.
ಅ.1: ಆಯುಧ ಪೂಜೆ ಅ.1 ರಂದು ಆಯುಧ ಪೂಜೆ-ವಾಹನಪೂಜೆ ಪೂರ್ವಾಹ್ನ ಗಂಟೆ 8.ರಿಂದ 1.30ರವರೆಗೆ ಹಾಗೂ ಸಂಜೆ 5.ರಿಂದ 9.ರವರೆಗೆ ನಡೆಯಲಿದೆ.ಉಳಿದ ದಿನಗಳಲ್ಲಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಮಹಾಪೂಜೆ ನಂತರ ನಡೆಯಲಿದೆ.ಪ್ರತಿ ದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.










