ಕೆವಿಜಿ : ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಆಗಸ್ಟ್-೨೦೨೫ರಲ್ಲಿ ನಡೆಸಿದ ಅಂತಿಮ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ಬಿ.ಎ.ಎಂ.ಎಸ್ ಪದವಿ ವಿಭಾಗದಲ್ಲಿ ೮೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜಾರಾಗಿದ್ದು, ೩೧ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ೫೦ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ
4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆ.















ಅಮೂಲ್ಯ ಹೊಸಮನೆ, ಅನುಷಾ ಜಿ, ಪೃಥ್ವಿಶ್ರೀ ಕೆ., ರುಚಿತಾ ಎಸ್., ಲಕ್ಷ್ಮಿ ಸುರೇಶ್, ಸ್ಪಂದನಾ ಆರ್., ಪಾತಿಮತ್ ಸಿಲಾ, ಹರ್ಷಿತಾ ಬಿ. ಎಸ್., ಟಿ. ಬಿ. ಸೌಮ್ಯ, ಇಂಚಾರ ಟಿ, ಎಸ್. ಇವರುಗಳು ಮೊದಲ ಹತ್ತು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಉಳಿದಂತೆ ಮಂಚಿಕಟ್ಲ ನವೀನಾ, ಮಂಗಲ ವಂಶಿ ಕೆ., ದೇಶಾಯಿ ಸ್ವಪ್ನಾಲಿ ಗಣಪತ್, ವಸುಂಧರಾ ಕೆ. ಎಸ್., ಹೇಮರಾಜ್ ಎ. ಬಿ., ಹರಿಪ್ರಿಯಾ ಎಸ್., ಕೃತಿಕಾ ಬಿ. ಕೆ., ಸುಚಿತ್ರಾ ಸಿ. ಕೆ., ಸುಮಿತ್ರಾ ಎನ್., ವಿಶ್ವನಾಥ್ ಪಾಟೀಲ್, ಅಮೃತಾ ಆರ್., ಗಾಯನ, ಚಿತ್ಕಲಾ ಭಾರದ್ವಾಜ್, ನಿತ್ಯಾದಾಸ್ ಕೆ. ಆರ್., ಶಾರದ ದುರ್ಗಾಯ್ಯ ಗೊಂಡಾ, ಅಶ್ವಿನಿ ಎ. ಆರ್. ಭಟ್, ಲತಾಶ್ರೀ ಎಂ. ಎಸ್., ಕೆ. ಬಿ. ದೀಪ್ತಿ ಶೆಟ್ಟಿ, ಮಧುಕರ್ ಬಿ., ಪಂಚಾಂಗೆ ಶುಭಾಂಗಿ ಹಾಗೂ ಸಂಭ್ರಮ್ ಬಿ. ವಿ. ಇವರುಗಳು ವಿಶಿಷ್ಟ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಚಿದಾನಂದ ಕೆ. ವಿ., ಪ್ರಧಾನ ಕಾರ್ಯದರ್ಶಿಗಳಾದ ಅರ್ಕಿಟೆಕ್ಟ್ ಅಕ್ಷಯ್ ಕೆ.ಸಿ., ಉಪಾಧ್ಯಕ್ಷರಾದ ಶ್ರೀಮತಿ. ಶೋಭಾ ಚಿದಾನಂದ, ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ. ಸಿ., ಜೊತೆ ಕಾರ್ಯದರ್ಶಿಗಳಾದ ಶ್ರೀ. ಹೇಮನಾಥ್ ಕೆ. ವಿ., ಕೋಶಾಧಿಕಾರಿಗಳಾದ ಡಾ. ಗೌತಮ್ ಗೌಡ, ಕೌಂನ್ಸಿಲ್ ಮೆಂಬರ್ಗಳಾದ ಶ್ರೀ ಜಗದೀಶ್ ಅಡ್ತಲೆ, ಶ್ರೀಮತಿ. ಮೀನಾಕ್ಷಿ ಕೆ. ಎಚ್. ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ.,ಯವರು ಅಭಿನಂದಿಸಿದ್ದಾರೆ.










