ರೂ.20 ಲಕ್ಷ ಅನುದಾನದಲ್ಲಿ ದೇವಸ್ಥಾನ ಹೋಗುವ ರಸ್ತೆ ಕಾಂಕ್ರೀಟೀಕರಣ















ಐವರ್ನಾಡು ಮುಖ್ಯರಸ್ತೆಯಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಅಗಲೀಕರಣಕ್ಕೆ ಅ.16 ರಂದು ಚಾಲನೆ ನೀಡಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಸ್ವಾಗತಿಸಿ,ಐವರ್ನಾಡಿನಿಂದ ದೇವಸ್ಥಾನ ಹೋಗುವ ರಸ್ತೆ ಅಭಿವೃದ್ದಿಗಾಗಿ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ದಿ ನಿಧಿಯಿಂದ ರೂ.,10 ಲಕ್ಷ ಮಂಜೂರಾಗಿದ್ದು ಬಳಿಕ ರೂ.10 ಮಂಜೂರುಗೊಳ್ಳಲಿದೆ.
ಈ ಒಟ್ಟು 20 ಲಕ್ಷ ರೂ.ಅನುದಾನದಲ್ಲಿ ರಸ್ತೆ ಕಾಂಕ್ರೀಟೀರಣಗೊಳ್ಳಲಿದೆ.
ಮೊದಲು ಜೆಸಿಬಿ ಮೂಲಕ ರಸ್ತೆ ಅಗಲೀಕರಣ ಕೆಲಸ ,ಚರಂಡಿ ಕೆಲಸ ಇಂದಿನಿಂದ ಪ್ರಾರಂಭಗೊಳ್ಳುತ್ತದೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.ಬಳಿಕ ಜೆಸಿಬಿ ಮುಖಾಂತರ ರಸ್ತೆ ಅಗಲೀಕರಣ ಪ್ರಾರಂಭಗೊಂಡಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಸಹಕಾರಿ ಸಂಘದ ಉಪಾಧ್ಯಕ್ಷ ಮಹೇಶ್ ಜಬಳೆ,ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ,ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ,ಸದಸ್ಯರಾದ ರಾಧಾಕೃಷ್ಣ ಚಾಕೋಟೆ,
ಸಹಕಾರಿ ಸಂಘದ ನಿರ್ದೇಶಕರಾದ ಸತೀಶ ಎಡಮಲೆ, ರವಿನಾಥ ಮಡ್ತಿಲ,ಶ್ರೀನಿವಾಸ ಮಡ್ತಿಲ,ನಟರಾಜ ಸಿ.ಕೂಪ್, ದಿವ್ಯ ಮಿತ್ತಮೂಲೆ,ಭವಾನಿ ಎಂ.ಸಿ, ಗೋಪಾಲಕೃಷ್ಣ ಚೆಮ್ನೂರು,ಚಂದ್ರಶೇಖರ ಎಸ್, ಅನಂತ ಖಂಡಿಗೆಮೂಲೆ,
ಗ್ರಾಮ ಪಂಚಾಯತ್ ಸದಸ್ಯರಾದ ಸುಜಾತ ಪವಿತ್ರಮಜಲು, ನಳಿನಿ ಕೋಡ್ತೀಲು,ದೇವಿಪ್ರಸಾದ್ ಕೊಪ್ಪತ್ತಡ್ಕ, ಹಿರಿಯರಾದ ಮಾಧವ ಭಟ್ ಶೃಂಗೇರಿ,ಜೆ.ಇ.ಪ್ರಸಾದ್ ಕತ್ಲಡ್ಕ,ಇಂಜಿನಿಯರ್ ಮಣಿಕಂಠ,
ಸಂಜೀವ ಗೌಡ,ಹರಿಶ್ಚಂದ್ರ ಕೊಪ್ಪತ್ತಡ್ಕ,ಜನಾರ್ಧನ ಕೊಪ್ಪಳ,ಸಾವಿತ್ರಿ ದೊಡ್ಡಮನೆ,ಪುರುಷೋತ್ತಮ ಎಣ್ಣೆಕಳ,ವಿನಯ ಕೋಡ್ತೀಲು,ಭಾಸ್ಕರ ಕೋಡ್ತೀಲು,ಚಂದ್ರಕಾಂತ ಕೋಡ್ತೀಲು,ತಿಲಕ ಕುತ್ಯಾಡಿ,ಶೇಖರ ಮಡ್ತಿಲ,ಶ್ರೀಮತಿ ಹರಿಣಿ ಚೆಮ್ನೂರು,ಲೋಕೇಶ ಪವಿತ್ರಮಜಲು,ಶಿವರಾಮ ಮಡ್ತಿಲ,ರಾಮಚಂದ್ರ ಕೊಯಿಲ,ಮೋಹನ್ ಬಾರೆತ್ತಡ್ಕ,ಜಯಂತ ಬೋಳುಗುಡ್ಡೆ,ಶಾಂತಾರಾಮ ಕಣಿಲೆಗುಂಡಿ,ಶೇಖರ ಮಡ್ತಿಲ,ಸತ್ಯನಾರಾಯಣ ಅಚ್ರಪ್ಪಾಡಿ, ಶ್ರೀಧರ ದೊಡ್ಡಮನೆ ಮತ್ತಿತರರು ಉಪಸ್ಥಿತರಿದ್ದರು.










