⬆️ ಬಲೀಂದ್ರ ಪೂಜೆl ಗೋ ಪೂಜೆl ತುಳಸೀ ಪೂಜೆ















ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ದೀಪಾವಳಿ ಪ್ರಯುಕ್ತ ಅ 21 ರಂದು ರಾತ್ರಿ 7 ಗಂಟೆಯಿಂದ ತುಳಸೀ ಪೂಜೆ, ಬಲೀಂದ್ರ ಪೂಜೆ, ಗೋ ಪೂಜೆ ನಡೆಯಲಿದೆ.
ಅ. 22 ರಂದು ಬೆಳಿಗ್ಗೆ ಗಂಟೆ 8.ರಿಂದ ಕೋಟಿ ಚೆನ್ನಯ್ಯ ಗರಡಿಯಲ್ಲಿ ತಂಬಿಲ ಸೇವೆ. ಗಂಟೆ 9 ರಿಂದ ದೇಗುಲದ ಎದುರು ಇರುವ ದೈವ ಸಾನಿಧ್ಯ ಗಳಲ್ಲಿ ತಂಬಿಲ ಸೇವೆ, ಗರಡಿ ಬೈಲು ಮೂಲಸ್ಥಾನ ಶ್ರೀ ಉಳ್ಳಾಕ್ಲು, ಶ್ರೀ ಕಾಚು ಕುಜುಂಬ ದೈವಸ್ಥಾನದಲ್ಲಿ ಬಲೀಂದ್ರ ಪೂಜೆ, 11ಗಂಟೆಗೆ ಶ್ರೀ ಉಳ್ಳಾಕ್ಳು, ಶ್ರೀ ಕಾಚು ಕುಜುಂಬ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ. ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್ ತಿಳಿಸಿರುತ್ತಾರೆ










