ಚಿನ್ನಾಭರಣಗಳಿಗೆ ಪ್ರತೀ ಪವನಿನ ಮೇಲೆ ರೂ.1,600 ರಿಯಾಯಿತಿ, ಮಜೂರಿ ಮೇಲೆ ಶೇ.100 ರಿಯಾಯಿತಿ
ಮಳಿಗೆಯಲ್ಲಿ ಕಿಕ್ಕಿರಿದು ಚಿನ್ನಾಭರಣ ಖರೀದಿಸುತ್ತಿರುವ ಗ್ರಾಹಕರು
ಸುಳ್ಯದ ಮುಖ್ಯ ರಸ್ತೆ ಕೊಯಿಂಗೋಡಿ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್ ನಲ್ಲಿ ದೀಪಾವಳಿಗೆ ಭಾರೀ ರಿಯಾಯಿತಿ ನೀಡಲಾಗಿದ್ದು ಗ್ರಾಹಕರು ಮಳಿಗೆಯಲ್ಲಿ ಕಿಕ್ಕಿರಿದು ಸೇರಿದ್ದು ಚಿನ್ನಾಭರಣ ಖರೀದಿಸುತ್ತಿದ್ದಾರೆ.
ಮುಳಿಯದ ಚಿನ್ನಾಭರಣಕ್ಕೆ ಆಕರ್ಷಿತರಾಗಿ ಭಾರೀ ಸಂಖ್ಯೆಯಲ್ಲಿ ಮಳಿಗೆಗೆ ಆಗಮಿಸುತ್ತಿದ್ದಾರೆ.
ಚಿನ್ನಾಭರಣಗಳ ಪ್ರತೀ ಪವನಿನ ಮೇಲೆ ರೂ. 1,600 ರಿಯಾಯಿತಿ ಹಾಗೂ
ಚಿನ್ನದ ಆಭರಣಗಳ ಮಜೂರಿ ಮೇಲೆ ಶೇ.100 ರಿಯಾಯಿತಿ ನೀಡಲಾಗಿದ್ದು ಈ ರಿಯಾಯಿತಿ ಸೆ.22 ರಿಂದ ಪ್ರಾರಂಭಗೊಂಡಿದ್ದು ಅ.31 ರವರೆಗೆ ನಡೆಯಲಿದೆ.
ನಿರಂತರ 40 ದಿನಗಳ ಕಾಲ ಡಿಸ್ಕೌಂಟ್ ನೀಡುತ್ತಿರುವ ಪ್ರತಿಷ್ಟಿತ ಸುಳ್ಯದ ಏಕೈಕ ಚಿನ್ನಾಭರಣದ ಮಳಿಗೆಯಾಗಿದ್ದು,
ವಿಶೇಷ ಆಫರ್ ಮತ್ತು ರಿಯಾಯಿತಿಗಳ ಮೂಲಕ ವೈಶಿಷ್ಟ್ಯಮಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಸಂಸ್ಥೆಯು ಯಶಸ್ವಿಯಾಗಿದೆ. ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿಗಳ ಉತ್ತಮ ಸೇವೆ ಗ್ರಾಹಕರನ್ನು ಸೆಳೆಯುವಂತೆ ಮಾಡಿದೆ.
















ಮಳಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ 1 ಕೆ.ಜಿ. ,40 ಗ್ರಾಂ. ಚಿನ್ನದ ಚೈನನ್ನು ಪ್ರದರ್ಶನಕ್ಕಿಡಲಾಗಿದೆ
ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಜ್ರದ ಉಂಗುರ ಮತ್ತು ವಜ್ರದ ಓಲೆಗಳ ವಿಶೇಷ ಸಂಗ್ರಹವಿದೆ.
ವಿಶಾಲವಾದ ಮಳಿಗೆಯಲ್ಲಿ ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ ವ್ಯವಸ್ಥೆ ಮಾಡಲಾಗಿದೆ.
ಗ್ರಾಹಕರಿಗೆ ಮಳಿಗೆಯ ಹಿಂಬದಿಯಲ್ಲಿ ವಾಹನ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿರುವುದಾಗಿ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.










