ಡಾ.ರೇಣುಕಾ ಪ್ರಸಾದ್ ರವರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಬೆಳ್ಳಿರಥ ಸಮರ್ಪಣೆ

0

ಬೆಳ್ಳಿರಥದ ಸ್ವಾಗತಕ್ಕೆ ಜಾಲ್ಸೂರಿನಲ್ಲಿ ಪೂರ್ವಭಾವಿ ಸಭೆ

ಪ್ರಸಿದ್ಧ ಪುಣ್ಯಕ್ಷೇತ್ರವಾದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಅಮರಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡರವರ ಪುತ್ರ ಡಾ.ರೇಣುಕಾ ಪ್ರಸಾದ್ ಕೆ.ವಿ.ಮತ್ತು ಮನೆಯವರು ಬೆಳ್ಳಿರಥ ಸಮರ್ಪಣೆ ಮಾಡಲಿದ್ದು, ರಥವು ಸಾಗಿಬರುವ ರಸ್ತೆಯ
ಜಾಲ್ಸೂರು ಪೇಟೆಯಲ್ಲಿ ಅದ್ದೂರಿ ಸ್ವಾಗತ ಮಾಡುವ ಬಗ್ಗೆ ಪೂರ್ವಭಾವಿ ಸಭೆ ಅ. 31 ರಂದು
ಜಾಲ್ಸೂರಿನ ಶ್ರೀ ಗುರು ರಾಘವೇಂದ್ರ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ರಥವು ನ.4 ರಂದು ಕೋಟೇಶ್ವರದಿಂದ ಹೊರಟು ಮಂಗಳೂರು, ಪುತ್ತೂರು ಆಗಿ ಕನಕಮಜಲು ಜಾಲ್ಸೂರಿಗೆ ಸಂಜೆ 6.30 ಕ್ಕೆ ತಲುಪಲಿದೆ.

ಪೂರ್ವಭಾವಿ ಸಭೆಗೆ ಆಗಮಿಸಿದ ರಥ ಸಮರ್ಪಣಾ ಸಮಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ಪಿ. ಎಸ್. ಗಂಗಾಧರ, ದಿನೇಶ್ ಮಡಪ್ಪಾಡಿ, ದೊಡ್ಡಣ್ಣ ಬರೆಮೇಲುರವರು ರಥ ನಿರ್ಮಾಣವಾದ ಕೋಟೇಶ್ವರದಿಂದ ಹೊರಡುವಲ್ಲಿಂದ ಸುಬ್ರಹ್ಮಣ್ಯದಲ್ಲಿ ಸಮರ್ಪಣೆಗೊಳ್ಳುವವರೆಗಿನ ಮಾಹಿತಿಯನ್ನು ನೀಡಿದರು. ರಥ ಸಂಚರಿಸುವ ರಸ್ತೆಯ ಅಲ್ಲಲ್ಲಿ ರಥವನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡು ಸ್ವಾಗತ ಕೋರಿ ಈ ಪುಣ್ಯಪ್ರದವಾದ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ವಿನಂತಿಸಿದರು.

ವೇದಿಕೆಯಲ್ಲಿ ಸಾಮಾಜಿಕ ಚಿಂತಕ ನ. ಸೀತಾರಾಮ, ಭಜನಾ ಮಂದಿರದ ಉಪಾಧ್ಯಕ್ಷ ಮಾಧವ ಕಾಳಮ್ಮನೆ, ಗಣೇಶೋತ್ಸವ ಸಮಿತಿ ಅಧ್ಯಕ್ಷ ನಿಶಾಂತ್ ಮೊಂಟಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಿವಾಕರ ರೈ, ಕೆ. ಎಂ.ಬಾಬು, ಗಣೇಶ್ ರೈ, ಜಯರಾಮ ಕದಿಕಡ್ಕ, ಬಾಲಕೃಷ್ಣ ಮಣಿಯಾಣಿ, ನಾಗಪ್ಪ ಕಾಳಮ್ಮನೆ, ಉಮಾನಾಥ ಪಟೇಲ್ ಮನೆ, ಆತ್ಮಾನಂದ ಗಬಲಡ್ಕ, ವಿವೇಕ್ ರೈ, ಸಂದೀಪ್ ಕದಿಕಡ್ಕ ಉಪಸ್ಥಿತರಿದ್ದರು.

ಕಮಲಾಕ್ಷ ನಂಗಾರು ಸ್ವಾಗತಿಸಿ, ಯಶ್ವಿತ್ ಕಾಳಮ್ಮನೆ
ವಂದಿಸಿದರು.