ಮನಾಲಿಯಲ್ಲಿ ಎನ್ ಎಸ್ ಎಸ್ ಸಾಹಸ ಶಿಬಿರ : ಬೆಳ್ಳಾರೆಯ ಡಾ. ಕೆ. ಶಿವರಾಮ ಕಾರಂತ ಪದವಿ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿನಿ ಆಯ್ಕೆ

0

ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ನಿರ್ದೇಶನಾಲಯ ಬೆಂಗಳೂರು ಇವರು ನವೆಂಬರ್ 5 ರಿಂದ 14 ರವರೆಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಪರ್ವತಾರೋಹಣ ಮತ್ತು ಸಂಬಂಧಿತ ಕ್ರೀಡೆಗಳ ಸಂಸ್ಥೆಯಲ್ಲಿ ನಡೆಯುವ ಸಾಹಸ ಶಿಬಿರದಲ್ಲಿ ಭಾಗವಹಿಸುವ ಮಂಗಳೂರು ವಿಶ್ವ ವಿದ್ಯಾಲಯದ ತಂಡಕ್ಕೆ ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಸ್ವಯಂ ಸೇವಕಿ ಕು. ಮೋಕ್ಷ ಕೆ. ವಿ. ಆಯ್ಕೆಯಾಗಿದ್ದಾರೆ.
ಇವರು ಉಬರಡ್ಕ ಮಿತ್ತೂರು ಗ್ರಾಮದ ಕೂಟೇಲು ವೆಂಕಪ್ಪ ಗೌಡ ಮತ್ತು ಶ್ರೀಮತಿ ಪೂರ್ಣಿಮಾ ದಂಪತಿ ಪುತ್ರಿ.