ಗರ್ಭಿಣಿಯರು, ಸಣ್ಣ ಪುಟ್ಟ ಮಕ್ಕಳು, ವಯೋವೃದ್ಧರು ಸಂಕಷ್ಟದಲ್ಲಿ

ಸುಳ್ಯ ನಗರ ಪಂಚಾಯತ್ ಹಳೆಗೇಟು ವಾರ್ಡಿನಲ್ಲಿ ಗುಂಡಿಯಡ್ಕ ಸಮೀಪ ವಾರ್ಡ್ ಸದಸ್ಯರ ಮನೆಯ ಬಳಿ ಕಳೆದ ಒಂದು ವಾರಗಳಿಂದ ಕುಡಿಯುವ ನೀರು ಬಾರದೆ ಸ್ಥಳೀಯ ಕೆಲವು ಮನೆಗಳಲ್ಲಿ ಜನರು ಸಂಕಷ್ಟದಲ್ಲಿದ್ದಾರೆ.















ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯರು ದೂರಿ ಕೊಳ್ಳುತ್ತಿದ್ದಾರೆ. ಒಂದೆಡೆ ಅಮೃತ್ ಯೋಜನೆಯ ನೀರಿನ ಪೈಪಳವಡಿಕೆಗೆ ಮಾಡಿರುವ ಕಾಮಗಾರಿಯಿಂದ ನೀರು ಬಾರದೆ ಇರುವ ಕಾರಣ ಎಂದು ಹೇಳುತ್ತಿದ್ದು ಅದನ್ನು ಅವರೇ ಸರಿ ಪಡಿಸಬೇಕೆಂದು ಸಂಬಂಧಪಟ್ಟವರು ಹೇಳುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಸ್ಥಳೀಯ ನಿವಾಸಿಗಳು ಒಂದು ವಾರಗಳಿಂದ ತಮ್ಮ ಮನೆಗಳಿಗೆ ನೀರಿಲ್ಲದೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಎಚ್ಚೆತ್ತು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ.









