ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ “ಚಂಪಾಷಷ್ಠಿ” ಪೂರ್ವಭಾವಿ ಸಭೆ

0

ಪಾರ್ಕಿಂಗ್, ಬ್ರಹ್ಮರಥ ಪಾಸ್, ಸ್ವಚ್ಚತೆ, ಉರುಳು ಸೇವೆ ಬಗ್ಗೆ ಚರ್ಚೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 2025-26 ನೇ ಸಾಲಿನ ವಾರ್ಷಿಕ “ಚಂಪಾಷಷ್ಠಿ” ಮಹಾರಥೋತ್ಸವ ಜಾತ್ರೆ ಸಿದ್ಧತೆಗಳ ಪೂರ್ವಭಾವಿ ಸಭೆ ನ.5 ರಂದು ನಡೆಯಿತು.

ಸುಳ್ಯ ವಿದಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಇವರ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿ ದರ್ಶನ್, ಎಸ್ಪಿ ಡಾ.ಅರುಣ್, ಸಹಾಯಕ ಆಯುಕ್ತರಾದ ಶ್ರೀಮತಿ ಸ್ಟೆಲ್ಲಾ ವರ್ಗೀಸ್ , ಡಿವೈಎಸ್ಪಿ ಅರುಣ್ ನಾಗೇಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜೆ, ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ವ್ಯಾಪಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಶ್ರೀಮತಿ ಲೀಲಾ ಮನಮೋಹನ್, ಅನಿಲ್ ಕುಮಾರ್, ಶ್ರೀಮತಿ ಸೌಮ್ಯ ಭರತ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಮಾಸ್ಟರ್ ಪ್ಲಾನ್ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಅಚ್ಚುತ ಆಲ್ಕಬೆ, ಪವನ್ ಎಂ.ಡಿ ಸೇರಿದಂತೆ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು, ಗ್ರಾಮ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಅರವಿಂದ ಅಯ್ಯಪ್ಪ ಸುತಗುಂಡಿ ಸ್ವಾಗತಿಸಿ, ಹರೀಶ್ ಇಂಜಾಡಿ ವಂದಿಸಿದರು.


ಸಭೆಯಲ್ಲಿ ಪಾರ್ಕಿಂಗ್, ಬ್ರಹ್ಮರಥ ಪಾಸ್ ಗೆ ಮಾನದಂಡ ಮಾಡಲು, , ಸ್ವಚ್ಚತೆ ಬಗ್ಗೆ, ಉರುಳು ಸೇವೆ ಬಗ್ಗೆ ಚರ್ಚೆ, ಭದ್ರತೆ ಬಗ್ಗೆ ಚರ್ಚೆ ನಡೆಯಿತು.