ಐವರ್ನಾಡು : ಮೋಕ್ಷಿತ್ ಚಳ್ಳತ್ತಡಿ ಅಗ್ನಿಪತ್ ಭಾರತೀಯ ಭೂಸೇನೆಗೆ ಆಯ್ಕೆ

ಐವರ್ನಾಡು ಗ್ರಾಮದ ಚಳ್ಳತ್ತಡಿ ಮನೆ ಮೋಕ್ಷಿತ್ ರವರು ಅಗ್ನಿಪತ್ ನೇಮಕಾತಿಯಲ್ಲಿ ಭಾರತೀಯ ಭೂಸೇನೆಗೆ ಆಯ್ಕೆಯಾಗಿದ್ದಾರೆ. ಅ.24 ರಂದು ತಮಿಳುನಾಡಿನ ವೆಲ್ಲಿಂಗ್ ಟೋನ್ ಎಂಬಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.ಇವರು ಮಂಗಳೂರು ಯುನಿವರ್ಸಿಟಿಯಲ್ಲಿ ದ್ವಿತೀಯ ವರ್ಷದ ಪದವಿ ಮಾಡುತ್ತಿದ್ದಾರೆ. ಇವರು ದೇವರಕಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿಯಾಗಿದ್ದು, ದೇವರಕಾನ ಚಳ್ಳತ್ತಡಿ ಮನೆ ಗಂಗಾಧರ ಗೌಡ ಮತ್ತು ಶ್ರೀಮತಿ ಕುಸುಮಾ ದಂಪತಿ ಪುತ್ರ.