ಸುಳ್ಯ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ದೋದೇಶ ಸಹಕಾರ ಸಂಘದ ಕೇಂದ್ರ ಕಚೇರಿಯಲ್ಲಿ ನಿರ್ದೇಶಕರಾದ ಜಾರ್ಜ್ ಡಿ ಸೋಜ ಕನಿಕರ ಪಳ್ಳ ರವರ ನೇತ್ವದಲ್ಲಿ ಕ್ರಿಸ್ಮಸ್ ಹಬ್ಬ ಆಚರಿಸಲಾಯಿತು.
ಸಹಕಾರ ಸಂಘದ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ ಕ್ರಿಸ್ಮಸ್ ಕೇಕ್ ಕತ್ತರಿಸಿ, ನಾಡಿನ ಸಮಸ್ತ ಜನತೆ ಸೌಹಾರ್ದತೆ ಯಿಂದ ಪರಸ್ಪರ ಸಹೋದರತ್ವದಿಂದ ಸಹಬಾಳ್ವೆ ನಡೆಸೋಣ ಎಂದು ಕ್ರಿಸ್ಮಸ್ ಹಬ್ಬದ ಶುಭಕೋರಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೆ. ಎಂ. ಮೊಯಿದಿನ್ ಪ್ಯಾನ್ಸಿ, ನಿರ್ದೇಶಕರಾದ ಎಸ್. ಶಂಸುದ್ದಿನ್,ಎ.ಕೆ. ಹಸೈನಾರ್ ಕಲ್ಲುಗುಡಿ, ಎಸ್.ಎಂ.ಬಾಪು ಸಾಹೇಬ್, ಕೆ.ಎಂ.ಅಬ್ದುಲ್ ಹಮೀದ್ ಬೆಳ್ಳಾರೆ, ಶ್ರೀಮತಿ ಅಮೀನ ಇಬ್ರಾಹಿಂ ಜಯನಗರ, ಮುಖ್ಯ ಕಾರ್ಯನಿರ್ವಾಹಣಾಧಿಕಾ ರಿ ಪ್ರಜ್ವಲ್ ನಾಯಕ್ ಉಪಸ್ಥಿತರಿದ್ದರು.