ಫೆ.9ರಂದು ಸುಳ್ಯದ ಪಯಸ್ವಿನಿ ನದಿಯ ನಾಗಪಟ್ಟಣ, ಭಸ್ಮಡ್ಕ ವ್ಯಾಪ್ತಿಯಲ್ಲಿ ಮೀನುಗಳು ಸಾವಿಗೀಡಾಗಿದ್ದು, ಇಂದು ಕಾಂತಮಂಗಲ ದಲ್ಲಿಯೂ ಮೀನುಗಳು ತೇಲುತ್ತಿವೆ.
ನದಿ ನೀರಿನಲ್ಲಿ ಮೀನುಗಳು ತೇಲುತ್ತಾ ಹೋಗುತ್ತಿರುವುದನ್ನು ಸಾರ್ವಜನಿಕರು ಕಾಂತಮಂಗಲ ಸೇತುವೆಯ ಮೇಲೆ ನಿಂತು ವೀಕ್ಷಿಸುತ್ತಿದ್ದಾರೆ.
ಕಾಂತಮಂಗಲ ನದಿಯ ಒಂದು ಕಡೆಯಲ್ಲಿ ಕೆಲವರು ನೀರಿಗಿಳಿದು ಮೀನನ್ನುಹಿಡಿದು ಕೊಂಡು ಹೋಗುತ್ತಿದ್ದಾರೆ.