ಅಕ್ಷರದೀಪ ಫೌಂಡೇಶನ್ ಗದಗ ಹಾಗೂ ಸ್ನೇಹಜೀವಿ ಫೌಂಡೇಶನ್ ಮುಂಬೈ ಕರ್ನಾಟಕ ರವರ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ ಕ್ರೇಜಿ ಟ್ಯಾಲೆಂಟ್ 5 ರಾಷ್ಟ್ರಮಟ್ಟದ ಆನ್ಲೈನ್ ಪ್ರತಿಭಾಷಣೆಯಲ್ಲಿ ಗೌರಿತಾ ಅವರ ಯೋಗ ನೃತ್ಯ ಪ್ರದರ್ಶನ ವನ್ನು ಅತ್ಯದ್ಭುತ ಪ್ರದರ್ಶನವೆಂದು ಪುರಸ್ಕರಿಸಿ ಸ್ವರ್ಣಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕುಮಾರಸ್ವಾಮಿ ಸ್ವಾಮಿ ವಿದ್ಯಾಲಯದಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಈಕೆ ಏನೆಕಲ್ಲು ಗ್ರಾಮದ ಮಳೆಯಾಲ ಬಳಿಯ ಡಾ. ಗೌತಮ್ ಹಾಗೂ ಡಾ. ರಾಜೇಶ್ವರಿ ದಂಪತಿ ಪುತ್ರಿ. ಯೋಗ ಗುರು ಶರತ್ ಮರ್ಗಿಲಡ್ಕರವರ ಶಿಷ್ಯೆ.