ಜಟ್ಟಿಪಳ್ಳದಲ್ಲಿ ವಲಯ ಸಮಿತಿ ರಚನೆ
ಸುಳ್ಯಕ್ಕೆ 60 ವರ್ಷ -ಸುದ್ದಿಗೆ 40 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಸುಳ್ಯದ ಸುದ್ದಿ ಸಮೂಹ ಸಂಸ್ಥೆ ವತಿಯಿಂದ ಆರಂಭಗೊಂಡಿರುವ ನಮ್ಮ ಗ್ರಾಮ – ನಮ್ಮ ಹೆಮ್ಮೆ ಅಭಿಯಾನದಡಿ ನಡೆಯಲಿರುವ ಸುದ್ದಿ ಸುಳ್ಯ ಹಬ್ಬದ ಜಟ್ಟಿಪಳ್ಳ ಸಮಿತಿ ರಚಿಸುವ ನಿಟ್ಟಿನಲ್ಲಿ ಎ.20 ಕಪಿಲಾ ಯುವಕ ಮಂಡಲದ ಯುವಸದನದಲ್ಲಿ ಸಭೆ ನಡೆಸಿ ಸಮಿತಿ ರಚಿಸಲಾಯಿತು.
‘ ನಮ್ಮ ಗ್ರಾಮ ನಮ್ಮ ಹೆಮ್ಮೆ’ ಅಭಿಯಾನದ ಬಗ್ಗೆ ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್ ಮಾತನಾಡಿ ” ಸುಳ್ಯ ನಗರ ಪಂಚಾಯತ್ ನ 18 ಮತ್ತು 20 ನೇ ವಾರ್ಡಿನಲ್ಲಿರುವ ಎಲ್ಲ ರೀತಿಯ ಸಂಪನ್ಮೂಲಗಳ ಮಾಹಿತಿ ಸಂಗ್ರಹ ಮಾಡಿ ಅದನ್ನೇ ನಮ್ಮ ಊರಿನ ಹೆಮ್ಮೆಯಾಗಿ ಪರಿವರ್ತಿಸುವ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಬಳಿಕ ವಲಯ ಸಮಿತಿ ರಚಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ಶ್ರೀಮತಿ ಸರೋಜಿನಿ ಪೆಲ್ತಡ್ಕ, ಅಧ್ಯಕ್ಷರಾಗಿ ರಾಮಚಂದ್ರ ಪೆಲ್ತಡ್ಕ, ಕಾರ್ಯಾಧ್ಯಕ್ಷರಾಗಿ ರಘುನಾಥ್ ಜಟ್ಟಿಪಳ್ಳ, ಸಂಯೋಜಕರಾಗಿ ದಿನೇಶ್ ಮಡಪ್ಪಾಡಿ,ಸಂಚಾಲಕರಾಗಿ ರಶೀದ್ ಜಟ್ಟಿಪಳ್ಳ ಪ್ರಧಾನ ಕಾರ್ಯದರ್ಶಿಯಾಗಿ ಚಿತ್ರಲೇಖಾ ಮಡಪ್ಪಾಡಿ, ಕೋಶಾಧಿಕಾರಿಯಾಗಿ ಶರೀಫ್ ಜಟ್ಟಿಪಳ್ಳ ಉಪಾಧ್ಯಕ್ಷರಾಗಿ ರಮಾನಂದ ರೈ, ಮಾಧವ ಜಟ್ಟಿಪಳ್ಳ, ಎನ್ ಎ ಅಬ್ದುಲ್ಲಾ, ಸನತ್ ಕುಮಾರ್ ರೈ, ಜತೆ ಕಾರ್ಯದರ್ಶಿಯಾಗಿ ರಜಾಕ್ ಕೆ.ಎಂ. ಆಯ್ಕೆಯಾದರು. ಪ್ರಧಾನ ಸಲಹೆಗಾರರಾಗಿ ಡಾ.ಎಸ್.ರಂಗಯ್ಯ ಮತ್ತು ದಯಾನಂದ ಆಳ್ವ, ಗೌರವ ಸಲಹೆಗಾರರಾಗಿ ಕೆ.ಆರ್. ಗೋಪಾಲಕೃಷ್ಣ, ಎಸ್.ಎ.ಎಸ್.ಮಹಮ್ಮದ್, ಹರಿಶ್ಚಂದ್ರ ಎಂ.ಆರ್., ಎಂ.ಆರ್, ಮೂಸಾ , ಸದಸ್ಯರನ್ನಾಗಿ ಪ್ರದೀಪ ಕಾರ್ಗಿಲ್ ಬಾಯ್ಸ್, ಚೇತನ್ ಜಟ್ಟಿಪಳ್ಳ ಕಪಿಲ, ಬಾಲಕೃಷ್ಣ, ಕುಲದೀಪ್ ಪೆಲ್ತಡ್ಕ, ಅಬ್ದುಲ್ ರಹಿಮಾನ್ ಸಿಎಫ್ಸಿ, ನ್ಯಾಯವಾದಿ ನಾರಾಯಣ ಜಟ್ಟಿಪಳ್ಳ, ಸವಿತಾ ಲಕ್ಷ್ಮಣ ಆಚಾರ್ಯ, ಸುನೀತಾ ರಾಮಚಂದ್ರ, ಉಮೇಶ್ ಬೊಳಿಯಮಜಲು, ಅಬೂಬಕ್ಕರ್ ಕೆ.ಎ., ನವೀನ್ ಕಜೆ, ಐ.ಬಿ.ಚಂದ್ರಶೇಖರ, ಶಿಹಾಬ್ ಷಾ, ತಾಜುದ್ದೀನ್ ಎಂ.ಎಸ್., ಜಯಂತಿ ಆರ್ ರೈ, ರಂಜಿನಿ ಸಂಜೀವ, ತನುದೀಪ್ ಪೆಲ್ತಡ್ಕ, ಸುಮತಿ ರಘುನಾಥ್, ರಾಜೇಶ್ ರೈ, ಪೂರ್ಣಿಮಾ ಜಟ್ಟಿಪಳ್ಳ, ಸಂತೋಷ್ ಕುಮಾರ್ ಶೆಟ್ಟಿ, ಸತೀಶ್ ಹಂಡನಮನೆ, ಸುಂದರ ಪೂಜಾರಿ ಕಾನತ್ತಿಲ, ಧನ್ಯರಾಜ್, ವಿಶುಕುಮಾರ್, ಮಂಜು, ಪವಿತ್ರ ರೋಶನ್, ಹರೀಶ್ ಭಟ್ ಅಲಂಗಾರು, ಮನು ಕೊಡಿಯಾಲಬೈಲು, ಮೊಯ್ದೀನ್ ರವರನ್ನು ನೇಮಕ ಮಾಡಲಾಯಿತು.
ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಸೇರಿಸಿಕೊಳ್ಳುವುದಾಗಿ ನಿರ್ಣಸಲಾಯಿತು.
ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ, ವಂದಿಸಿದರು.