ದಿ. ಪಿ.ವಿ.ಕೆ.ಆರ್. ವೈದ್ಯರ್ ರವರ ಸ್ಮರಣಾರ್ಥ ಮಿತ್ರ ಭೋಜನ ಕೂಟ

0

ಶ್ರದ್ಧಾಂಜಲಿ ಸಭೆ ಹಾಗೂ ಗಣ್ಯರಿಂದ ನುಡಿ ನಮನ

ಇತ್ತೀಚಿಗೆ ನಿಧನರಾದ ಸುಳ್ಯದ ಕೋಟೆಕ್ಕಲ್ ಆಯುರ್ವೇದ ವೈದ್ಯ ದಿವಂಗತ ಪಿ.ವಿ.ಕುಂಞಿ ರಾಮನ್ ವೈದ್ಯರ್ ರವರ ಸ್ಮರಣಾರ್ಥ ಅವರ ಕುಟುಂಬದ ವತಿಯಿಂದ ಮಿತ್ರ ಭೋಜನ ಕೂಟ ಹಾಗೂ ಶ್ರದ್ಧಾಂಜಲಿ ಸಭೆ ಏ 20 ರಂದು ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.

ಶ್ರದ್ಧಾಂಜಲಿ ಸಭೆಯಲ್ಲಿ ಸುಳ್ಯದ ಹಲವಾರು ಗಣ್ಯರುಗಳು ಭಾಗವಹಿಸಿ ವೈದ್ಯರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.


ಲಯನ್ಸ್ ಮಾಜಿ ಗವರ್ನರ್ ಎಂ ಬಿ ಸದಾಶಿವರವರು ನುಡಿನಮನ ಸಲ್ಲಿಸಿ ಪಿ ವಿ ಕುಂಞಿ ರಾಮನ್ ವೈದ್ಯರ್ ರವರ ಸರಳ ಜೀವನ, ಹಾಗೂ ಅವರು ಸುಳ್ಯದ ಜನತೆಗೆ ಸಲ್ಲಿಸಿದ ಆಯುರ್ವೇದ ವೈದ್ಯಕೀಯ ಸೇವೆಯ ಕುರಿತು ಮಾತನಾಡಿದರು.ಸುಳ್ಯದ ಜನತೆಗೆ ಕೋಟೆಕ್ಕಲ್ ಆಯುರ್ವೇದವನ್ನು ಪರಿಚಯಿಸುವಲ್ಲಿ ವೈದ್ಯರ ಶ್ರಮದ ಕುರಿತ ಮಾಹಿತಿಯನ್ನು ನೀಡಿದರು.

ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಎನ್.ಜಯಪ್ರಕಾಶ್ ರೈ‌ಯವರು‌ ನುಡಿನಮನ ಸಲ್ಲಿಸಿ, “ಪಿ.ವಿ.ಕೆ.ಆರ್. ವೈದ್ಯರ್ ರವರು ವಾಲಿಬಾಲ್ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ದೊಡ್ಡದು.ಸುಳ್ಯದಲ್ಲಿ ಉತ್ತಮ ಪಂದ್ಯಾಟವನ್ನು ಆಯೋಜಿಸಲು ಇವರ ಪಾತ್ರ ಮುಖ್ಯವಾಗಿತ್ತು ಅದನ್ನು ನಾವು‌ ನೆನಪಿಸಬೇಕಾದುದು ನಮ್ಮ ಕರ್ತವ್ಯ. ಸಮಾಜದ ಎಲ್ಲರೊಂದಿಗೆ ಸಾಮರಸ್ಯ ದಿಂದ ಬೆರೆತ ಕುಟುಂಬ ಅವರದ್ದು” ಎಂದು ಹೇಳಿದರು.

ಸುಳ್ಯ‌ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ ಮಾತನಾಡಿ ವೈದ್ಯರ್ ರವರ ಸೇವೆಯ ಬಗ್ಗೆ ಮತ್ತು ಅವರ ಸರಳ ಜೀವನ ಶೈಲಿಯ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸುಳ್ಯ ಅಕಾಡಮಿ ಆಫ್ ಲಿಬರಲ್ ಎಜುಕೇಷನ್ ಇದರ ಅಧ್ಯಕ್ಷ ಡಾ. ಚಿದಾನಂದರು ಸೇರಿದಂತೆ ಹಲವು ಮುಖಂಡರುಗಳು, ಹಾಗೂ ವೈದ್ಯರ್ ರವರ ಹಿರಿಯ ಹಾಗೂ ಕಿರಿಯ ಸಹೋದರರು ಗಳಾದ
ಪಿ.ವಿ.ಕೃಷ್ಣನ್,ಪಿ.ವಿ.ರಾಘವನ್ ಪಿ.ವಿ.ನಾರಾಯಣನ್,ಶ್ರೀಮತಿ ಲಕ್ಷ್ಮಿ ಗಂಗಾಧರನ್ ಪುತ್ತೂರು,
ಡಾ.ಪ್ರದೀಪ್,ಶ್ರೀಮತಿ ಲತಾ ಮನೋಜ್,ಪುತ್ರಿ ಡಾ. ಪ್ರಸಿತಾ ರಾಜೇಶ್ ಹಾಗೂ ಕುಟುಂಬದ ಸದಸ್ಯರುಗಳು ಹಾಗೂ ಅವರ ನೂರಾರು ಅಭಿಮಾನಿ ಬಳಗದವರು ಭಾಗವಹಿಸಿದ್ದರು.

ಎಸ್.ಸಿಕ್ಸ್ ಗೌರವಾಧ್ಯಕ್ಷ ಗೋಕುಲ್ ದಾಸ್ ಕೆ.ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ವೈದ್ಯರ್ ರವರ ಪುತ್ರ ಡಾ. ಪ್ರಶಾಂತ್ ವಂದಿಸಿದರು.