ರೇಶನ್ ಖರೀದಿಸಿ ಸೊಸೈಟಿಯ ಹೊರಗಡೆ ಇರಿಸಿದ 50ಕೆಜಿ ಅಕ್ಕಿ ಕಾಣೆಯಾದ ಘಟನೆ ದುಗ್ಗಲಡ್ಕದಿಂದ ವರದಿಯಾಗಿದೆ.
ದುಗ್ಗಲಡ್ಕ ಸಮೀಪದ ಕಲ್ಮಡ್ಕ ಚೇತನ್ ರವರು ಇಂದು ಬೆಳಿಗ್ಗೆ 10ಗಂಟೆ ಸುಮಾರಿಗೆ ರೇಶನ್ ಖರೀದಿಗೆ ದುಗ್ಗಲಡ್ಕ ಸಿ.ಎ.ಬ್ಯಾಂಕ್ ಶಾಖೆಗೆ ಬಂದಿದ್ದರು. ಅಲ್ಲಿ ರೇಶನ್ ಖರೀದಿಸಿ 50ಕೆಜಿ ಅಕ್ಕಿಯನ್ನು ಸೊಸೈಟಿಯ ಹೊರಗಿರಿಸಿ ರಿಕ್ಷಾ ತರುತ್ತೇನೆಂದು ಹೋದರು.ಬಳಿಕ ಬಂದು ನೋಡುವಾಗ ಅಕ್ಕಿಯ ಕಟ್ಟು ಕಾಣೆಯಾಗಿತ್ತು. ಈ ಬಗ್ಗೆ ಸಿ.ಎ.ಬ್ಯಾಂಕ್ ಗೆ ದೂರು ಹೋಗಿದ್ದು, ಪರಿಶೀಲನೆಗೆ ಸಿಬ್ಬಂದಿಯನ್ನು ಕಳುಹಿಸಿರುವುದಾಗಿ ತಿಳಿದುಬಂದಿದೆ. ಉಚಿತವಾಗಿ ಸಿಗುವ ಅಕ್ಕಿಯನ್ನು ಕೊಂಡೊಯ್ದವರು ಯಾರು ಎಂಬ ಪ್ರಶ್ನೆ ಜನರನ್ನು ಕಾಡಿದೆ.