ಮಂಗಳೂರಲ್ಲಿ ನ್ಯಾಯವಾದಿಯಾಗಿದ್ದ ಪಾರೆಪ್ಪಾಡಿ ಸುಂದರ ಗೌಡ ನಿಧನ

0

ಮಂಗಳೂರಿನಲ್ಲಿ ನ್ಯಾಯವಾದಿಯಾಗಿದ್ದ ಸುಳ್ಯದ ದೇವಚಳ್ಳ ಗ್ರಾಮದ ಪಾರೆಪ್ಪಾಡಿ ಸುಂದರ ಗೌಡರು ಇಂದು ಮಧ್ಯಾಹ್ನ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಎರಡು ವಾರಗಳಿಂದ ಅಸೌಖ್ಯಕ್ಕೊಳಗಾಗಿ ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು , ಅಳಿಯ ಮತ್ತು ಮೊಮ್ಮಗುವನ್ನು , ಸಹೋದರರು ಮತ್ತು ಸಹೋದರಿಯರನ್ನು ಅಗಲಿದ್ದಾರೆ. ಅವರ ಅಂತ್ಯಸಂಸ್ಕಾರವನ್ನು ಮಂಗಳೂರಿನ ಕದ್ರಿಯಲ್ಲಿ ನಡೆಸಲಾಗುವುದೆಂದು ತಿಳಿದುಬಂದಿದೆ.