Home ಇತ್ತೀಚಿನ ಸುದ್ದಿಗಳು ರ್ಲಡ್ಕ ವಿಲ್ಲಾದಲ್ಲಿ ಯಶಸ್ವಿ ಉದ್ಯಮದ ಕುರಿತು ಮಾಹಿತಿ ಕಾರ್ಯಾಗಾರ

ರ್ಲಡ್ಕ ವಿಲ್ಲಾದಲ್ಲಿ ಯಶಸ್ವಿ ಉದ್ಯಮದ ಕುರಿತು ಮಾಹಿತಿ ಕಾರ್ಯಾಗಾರ

0

ಉದ್ಯಮವನ್ನು ಕಾಲಕ್ಕನುಗುಣವಾಗಿ ಉನ್ನತ್ತಿಕರಿಸಿ-ಡಾ.ಹಕೀಂ ಅಝ್ಹರಿ

ಮರ್ಕಜ್ ನಾಲೇಜ್ ಸಿಟಿ ಇದರ ವತಿಯಿಂದ ಉದ್ಯಮಗಳ ಮತ್ತು ಎಸ್ ವೈ ಎಸ್ ನಾಯಕರ ಸಮಾಗಮ ಕಾರ್ಯಕ್ರಮ ಜಟ್ಟಿಪಳ್ಳ ರಸ್ತೆಯಲ್ಲಿರುವ ಹರ್ಲಡ್ಕ ವಿಲ್ಲಾದಲ್ಲಿ ನಡೆಯಿತು. ಉದ್ಯಮಿಗಳಿಗೆ ಉದ್ಯಮವನ್ನು ‌ಅಬಿವೃದ್ದಿಪಡಿಸುವುದು ಹೇಗೆ ಎಂಬ ವಿಚಾರದಲ್ಲಿ ಮಾಹಿತಿ ನೀಡಿದರು.
ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ನಮ್ಮ ಉದ್ಯಮವನ್ನು ಅಭಿವೃದ್ಧಿ ಪಡಿಸಬೇಕು‌ ಅದಕ್ಕೆ ಪೂರಕವಾದ ಟೆಕ್ನಿಕಲ್ ಕಲಿತು ಉದ್ಯಮದಲ್ಲಿ ಒಂದು ಹೆಜ್ಜೆ ಮುಂದಿಡುವಂತಗಾಬೇಕು ಉದ್ಯಮ ಯಶಸ್ವಿಯಾಗಿ ಸಾಗಬೇಕಾದರೆ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಡಬೇಕು ಆದರೆ ಮಾತ್ರ ಒರ್ವ ಯಶಸ್ವಿ ಉದ್ಯಮಿಯಾಗಿ ಬೆಳೆಯಲು ಸಾಧ್ಯ ಎಂದು ಮರ್ಕಜ್ ನಾಲೇಜ್ ಸಿಟಿ ಆಡಳಿತ ನಿರ್ದೇಶಕ ಡಾ.ಹಕೀಂ ಅಝ್ಹರಿ ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಹರ್ಲಡ್ಕ ವಿಲ್ಲಾದ ಲತೀಫ್ ಹರ್ಲಡ್ಕ ವಹಿಸಿದರು.


ಮೊಗರ್ಪಣೆ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್‌ ಖಾದರ್ ಸಖಾಫಿ ಮುದುಗಡ ದುವಾಶಿರ್ವಚನ ಮಾಡಿದರು.
ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್, ಉದ್ಯಮಿ ಅಬ್ದುಲ್‌ ರಹಿಮಾನ್ ಸಂಕೇಶ್,ಹಿರಿಯ ಉದ್ಯಮಿ ಅಬೂಭಕ್ಕರ್ ಹಾಜಿ ಬಿಎಂಎ ಗ್ರೂಪ್, ನ್ಯಾಯವಾದಿ ಅಬೂಭಕ್ಕರ್ ಅಡ್ಕಾರ್,ಗಾಂಧಿನಗರ ಜಮಾಯತ್ ಕಮಿಟಿ ಉಪಾಧ್ಯಕ್ಷ ಅಬ್ದುಲ್‌ ಹಮೀದ್ ಬೀಜಕೊಚ್ಚಿ,ಕೋಶಾಧಿಕಾರಿ ಹಮೀದ್ ಹಾಜಿ ಎಸ್ ಎಂ, ಬಾಬ ಹಾಜಿ ಎಲಿಮಲೆ, ಸುಳ್ಯ ತಾಲೂಕು ಸಂಯುಕ್ತ ಜಮಾಯತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನ್ಸಾರಿಯಾ ಖತೀಬರಾದ ಹಾಫೀಳ್ ಹಾಮೀದ್ ಸಖಾಫಿ ಸ್ವಾಗತಿಸಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

NO COMMENTS

error: Content is protected !!
Breaking