ಕಾಣೆಯಾದ ಬಳ್ಪದ ಯುವಕನ ಶವ ಕಾಡಿನಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ.
ಬಳ್ಪ ಗ್ರಾಮದ ಪಾದೆ ನರಿಯಾಂಗ ಕೊರಗಪ್ಪರವರ ಪುತ್ರ ಗಣೇಶ್ (29ವ)ಎಂಬ ಯುವಕ ಎ.21 ರಂದು ಮನೆಯಿಂದ ನಾಪತ್ತೆಯಾಗಿದ್ದರು.
ಎ.23 ರಂದು ಸಂಜೆ ಬಳ್ಪ ಸಮೀಪ ಸುಬ್ರಹ್ಮಣ್ಯ ರಸ್ತೆ ಸಮೀಪ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅಲ್ಲೇ ಪಕ್ಕದಲ್ಲಿ ಅವರ ಬೈಕ್ ಕೂಡ ಪತ್ತೆಯಾಗಿದೆ. ವಿಷಯ ತಿಳಿದು ಮನೆಯವರು ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.