ಕೊಡಗು ಸಂಪಾಜೆ ಗ್ರಾಮದ ಕೊಯನಾಡು – ಗುಡ್ಡೆ ಗದ್ದೆ ಶ್ರೀ ಮಲೆ ಚಾಮುಂಡೇಶ್ವರಿ ದೈವದ ವಾರ್ಷಿಕ ಪ್ರತಿಷ್ಠೆ ಕಾರ್ಯಕ್ರಮ ಹಾಗೂ ನೇಮ ನಡಾವಳಿ ಮೇ 3 ರಂದು ನಡೆಯಲಿದೆ.
ಮೇ 3 ಶನಿವಾರದಂದು ಬೆಳಿಗ್ಗೆ 6 ಗಂಟೆಗೆ ಶ್ರೀ ಗಣಪತಿ ಹೋಮ, 9 ಗಂಟೆಗೆ ಪ್ರತಿಷ್ಠಾ ಪೂಜೆ , ಮಂಗಳಾರತಿ , ಪ್ರಸಾದ ವಿತರಣೆ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಯಿಂದ ಶ್ರೀ ಮಲೆ ಚಾಮುಂಡೇಶ್ವರಿ ದೈವ ಹಾಗೂ ಗುಳಿಗ ದೈವದ ನೇಮ ನಡಾವಳಿ , ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಊರ – ಪರವೂರಿನಿದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದೈವದ ಕೃಪೆಗೆ ಪಾತ್ರರಾಗಬೇಕಾಗಿ ದೈವಸ್ಥಾನದ ಮೊಕ್ತೇಸರ ಮತ್ತಾಡಿ ಬಂಬ, ದೈವದ ಪೂಜಾಕರ್ಮಿ ಕೆ.ಕೆ ರಮೇಶ್ ಮತ್ತು ಸಮಿತಿ ಸದಸ್ಯರು, ಕುಟುಂಬಸ್ಥರು ಹಾಗೂ ಊರಭಕ್ತಾಧಿಗಳು ತಿಳಿಸಿದ್ದಾರೆ.