ಪಹಲ್ಗಾಂವ್ ನಲ್ಲಿ ಆತಂಕವಾದಿಗಳಿಂದ ನಡೆದಿರುವ ದುಷ್ಕೃತ್ಯಕ್ಕೆ ಕಲ್ಲುಗುಂಡಿ ಮುಹಿಯದ್ದಿನ್ ಜುಮ್ಮಾ ಮಸ್ಜಿದ್ ವತಿಯಿಂದ ಇಂದು ಜುಮಾ ನಮಾಜ್ ಬಳಿಕ ಖಂಡನೆ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಭಾರತದ ಹಚ್ಚ ಹಸಿರಿನ ತಾಣ ಕಾಶ್ಮೀರದ ಪಹಲ್ಗಾಮ್ ಬಳಿ ಉಗ್ರಗಾಮಿಗಳಿಂದ ಹುತಾತ್ಮರಾದ ಪ್ರವಾಸಿಗರಿಗೆ ಸಂತಾಪ ಸೂಚಿಸಿ ಮಾತಾನಾಡಿದ ಕಲ್ಲುಗುಂಡಿ ಜುಮಾ ಮಸೀದಿಯ ಧರ್ಮ ಗುರುಗಳಾದ ನಾಸಿರ್ ದಾರಿಮಿ ‘ಇಸ್ಲಾಂ ಧರ್ಮ ಯಾವತ್ತೂ ಉಗ್ರ ವಾದವನ್ನು ಬೆಂಬಲಿಸುವುದಿಲ್ಲ, ಹಾಗೂ ಉಗ್ರಗಾಮಿಗಳನ್ನೂ ಕೂಡ ಬೆಂಬಲಿಸುವುದಿಲ್ಲ.
ನಾವೆಲ್ಲರೂ ಭಾರತೀಯರು ಒಂದಾಗಿ ಅವರಿಗಾಗಿ ಪ್ರಾರ್ಥಿಸೋಣ.
ನಮ್ಮ ನೆಲ, ಜಲ ರಾಷ್ಟ್ರ ರಕ್ಷಣೆಗೆ ಕೈ ಜೋಡಿಸೋಣ ಎಂದು ಕರೆ ನೀಡಿದರು.
ಖಂಡನಾ ಸಭೆಯಲ್ಲಿ ಜಮಾಅತ್ ಅಧ್ಯಕ್ಷರಾದ ಆಲಿ ಹಾಜಿ ಎಸ್. ಉಪಾಧ್ಯಕ್ಷ ಕೆ. ಎಂ. ಅಶ್ರಫ್,ಮಾಜಿ ಅಧ್ಯಕ್ಷ ಸಮಸ್ತ ಸoಯುಕ್ತ ಜಮಾಅತ್ ಉಪಾಧ್ಯಕ್ಷರಾದ ಅಬ್ಬಾಸ್ ಹಾಜಿ ಸಂಟ್ಯಾರ್, ಸುಳ್ಯ ತಾಲೂಕು ಮದ್ರಸಾ ಮೇನೇಜ್ಮೆನ್ಟ್ ಅಧ್ಯಕ್ಷರಾದ ತಾಜ್ ಮಹಮ್ಮದ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಜಿ ಕೆ ಹಮೀದ್ ಗೂನಡ್ಕ, ಜಮಾಅತ್ ಮಾಜಿ ಅಧ್ಯಕ್ಷರಾದ ಎಂ. ಸಿ .ಅಬೂಬಕ್ಕರ್,ಮಾಜಿ ಕಾರ್ಯದರ್ಶಿ ರಝಾಕ್ ಸೂಪರ್, ಸಮಿತಿ ಸದಸ್ಯರುಗಳಾದ ಅಬೂಬಕ್ಕರ್ ಸೂಪರ್, . ಕೆ,ಪಿ ಮಹಮದ್ ಕಣಕೂಡ್,ರಫೀಕ್ ಪ್ರಗತಿ ಚಿಕ್ಕನ್, ಹನೀಫ್ ಕೆ. ಎಸ್. ಕಡೆಪ್ಪಾಲ,ಕಬೀರ್ ಕಡೆ ಪ್ಪಾಲ ,ಸಾದಿಕ್ ಚಟ್ಟೆಕಲ್ಲು ಸಾಜಿದ್ ಉಸ್ತಾದ್ , ಕಲ್ಲುಗುಂಡಿ ಜುಮಾ ಮಸೀದಿಯ ಕಾರ್ಯದರ್ಶಿ ಇರ್ಷಾದ್ ಬದ್ರಿಯಾ ಪಿ ಎ, ಆಮು ಬಾಲಂಬಿ, ಹಸೈನಾರ್ ಚಟ್ಟೆಕಲ್ಲು, ಆಡಳಿತ ಮಂಡಳಿ ಸದಸ್ಯ ರಫೀಕ್ ಕರಾವಳಿ ಹಸೈನಾರ್,ಹಾಗೂ ಜಮಾಅತ್ ಸದಸ್ಯರುಗಳು ಉಪಸ್ಥಿತರಿದ್ದರು.