ಬಳ್ಪ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸುಮಾರು 15 ವರ್ಷಗಳ ಕಾಲ ಕಾರ್ಯದರ್ಶಿ ಸೇವೆ ಸಲ್ಲಿಸಿದ್ದ ಉಮೇಶ್ ಬುಡೆಂಗಿ ಅಸೌಖ್ಯದಿಂದ ಏ. 27ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 51 ವರ್ಷ ವಯಸ್ಸಾಗಿತ್ತು. ಬಳ್ಪ ವಿಕ್ರಮ ಯುವಕ ಮಂಡಲದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರ ಅವಧಿಯಲ್ಲಿ ವಿಕ್ರಮ ಯುವಕ ಮಂಡಲ ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಪ್ರತಿನಿಧಿಸಿರುವುದಲ್ಲದೆ, ಸುಳ್ಯ ತಾಲೂಕು ಮಟ್ಟದ ಯುವಜನ ಮೇಳದಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿತ್ತು.
ಮೃತರು ತಾಯಿ ಶ್ರೀಮತಿ ವೀರಮ್ಮ, ಪತ್ನಿ ಶ್ರೀಮತಿ ಹೇಮಲಾಕ್ಷಿ, ಪುತ್ರ ಕಿಶನ್, ಪುತ್ರಿ ಕು. ಪೂರ್ವಿಕ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

