ಗುತ್ತಿಗಾರು :ಭಯೋತ್ಪಾದಕರ ದಾಳಿಯನ್ನು ಖಂಡಿಸಿ ದೀಪದೊಂದಿಗೆ ಮೌನ ಯಾತ್ರೆ

0

ಇಂಪಾರ್ಟೆಂಟ್ ಎಫ್ ಸಿ ಗುತ್ತಿಗಾರು ಮತ್ತು ಇತರ ಸಂಘ ಸಂಸ್ಥೆಗಳ ಗುತ್ತಿಗಾರು ಇವರ ಆಶ್ರಯದಲ್ಲಿ, ಕಾಶ್ಮೀರದಲ್ಲಿ ನಡೆದ ಭಾರತೀಯ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ದೀಪದೊಂದಿಗೆ ಮೌನ ಯಾತ್ರೆ ಏ. 26 ರಂದು ಸಂಜೆ ಗುತ್ತಿಗಾರಿನ ಬಾಕಿಲದಿಂದ ಮುತ್ತಪ್ಪನಗರದವರೆಗೆ ನಡೆಯಿತು.

ಕಾರ್ಯಕ್ರಮದಲ್ಲಿ, ಇಂಪಾರ್ಟೆಂಟ್ ಎಫ್ ಸಿ ಕಾರ್ಯದರ್ಶಿ ವರ್ಷಿತ್ ಕಡ್ತಲ್ ಕಜೆ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಇಂಪಾರ್ಟೆಂಟ್ ಎಫ್ ಸಿ ಅಧ್ಯಕ್ಷರಾದ ಮುಳಿಯ ಸಾತ್ವಿಕ್ ಅವರು ಭಾಷಣ ಮಾಡಿ, ಈ ದುಷ್ಕೃತ್ಯ ಹೇಗೆ ನಡೆದಿದೆ ಎಂಬುದರ ಕುರಿತು ವಿವರಿಸಿದರು ಮತ್ತು ಹಿಂದೂ ಸಮುದಾಯ ಒಗ್ಗೂಡಿಯಾಗಿ ಬದುಕಬೇಕಾದ ಅಗತ್ಯತೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

.
ಕಾರ್ಯಕ್ರಮದಲ್ಲಿ ಅಜಿತ್ ಬಾಕಿಲ, ಚಂದ್ರಶೇಖರ ಕಡೋಡಿ, ರಾಕೇಶ್ ಮೆಟ್ಟಿನಡ್ಕ, ಕೌಶಿಕ್ ಶ್ಯಾಮ್ ಮುಳಿಯ, ಶ್ರಿಶರಣ್ ಮೊಗ್ರ,ಆಶ್ಲೇಶ್ ಕೆ. ಡಿ, ಪ್ರಶಾಂತ್ ಬಾಕಿಲ, ಲೋಕೇಶ್ ಡಿ ಆರ್, ಜಗದೀಶ್ ಪೈಕ್ಕ, ಜಗದೀಶ್ ಬಾಕಿಲ ಮತ್ತಿತರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೂರ್ಣ ಶ್ರದ್ಧೆಯಿಂದ ದೀಪಯಾತ್ರೆ ನಡೆಸಲಾಯಿತು. ಚರಣ್ ಕೊಂಬೊಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು