ಭಜನೆಯಿಂದ ಸನಾತನ ಧರ್ಮ ರಕ್ಷಣೆ: ಚಂದ್ರಶೇಖರ ಶಾಸ್ತ್ರಿ
ಮಕ್ಕಳು ಮನೆಗೆ ಅಮೂಲ್ಯ ಸಂಪತ್ತು: ಸಂತೋಷ್
“ದೇವರ ಒಲಿಸುವ ಸುಲಭ ಮಾರ್ಗ ಭಜನೆ . ಭಜನೆ ಎಲ್ಲರನ್ನೂ ಒಗ್ಗೂಡಿಸುತ್ತದೆ. ಮನೆ ಮನಗಳು ಬೆಳಗುತ್ತದೆ.ಮಕ್ಕಳಲ್ಲಿ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ವಿಶೇಷವಾಗಿ ನಮ್ಮ ಸನಾತನ ಧರ್ಮ ರಕ್ಷಣೆ ಆಗುತ್ತದೆ.” ಎಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ರವರು ಹೇಳಿದರು.

ಅವರು ಎ. 28ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ
ಶ್ರೀ ಶಾರದಾಂಬಾ ಭಜನಾ ಮಂಡಳಿ(ರಿ)ಪಂಜ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಸುಳ್ಯ ತಾಲೂಕು,ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಡಬ ತಾಲೂಕು ಇದರ ಸಹಕಾರದಲ್ಲಿ ನಡೆಯಲಿರುವ 16ನೇ ವರ್ಷದ ಭಜನಾ ತರಬೇತಿ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಭಜನಾ ಪರಿಷತ್ ಸಮನ್ವಯಾಧಿಕಾರಿ ಸಂತೋಷ್ ಅಳಿಯೂರು
ಮಾತನಾಡಿ ” ಮಕ್ಕಳು ಮನೆಯ ಅಮೂಲ್ಯ ಸಂಪತ್ತು. ಸಂಸ್ಕಾರ, ಧರ್ಮ ರಕ್ಷಣೆಗೆ ಮಕ್ಕಳಿಗೆ ಭಜನೆ, ಸಂಸ್ಕಾರ, ಧಾರ್ಮಿಕ ಶಿಕ್ಷಣ ಅತೀ ಅವಶ್ಯ” ಎಂದು ಹೇಳಿದರು.

ಭಜನಾ ತರಬೇತಿ ಸಂಚಾಲಕ ಲೋಕೇಶ್ ಬರೆಮೇಲು ಸಭಾಧ್ಯಕ್ಷತೆ ವಹಿಸಿದ್ದರು.
ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿ ಟ್ರಸ್ಟ್ ಪಂಜ ಇದರ ವಲಯ ಮೇಲ್ವಿಚಾರಕಿ ಶ್ರೀಮತಿ ರೋಹಿಣಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವಲಯ ಸಂಯೋಜಕಿ ಶ್ರೀಮತಿ ಜಯಶ್ರೀ, ಭಜನಾ ತರಬೇತುದಾರರಾದ ಶ್ರೀಮತಿ ನಳಿನಾಕ್ಷಿ ವಿ ಆಚಾರ್ಯ ಕಲ್ಮಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯಶ್ವಿತಾ ಪಂಬೆತ್ತಾಡಿ ಪ್ರಾರ್ಥಿಸಿದರು.ಶ್ರೀಮತಿ ಸವಿತಾ ಪಂಬೆತ್ತಾಡಿ ಸ್ವಾಗತಿಸಿದರು. ಭಜನಾ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್ ತೋಟ ನಿರೂಪಿಸಿದರು. ಮಧುಕರ ಕುದ್ವ ವಂದಿಸಿದರು.
ಭಜನಾ ತರಬೇತಿ ಮೇ.4 ತನಕ ನಡೆಯಲಿದೆ. ಮೇ.4 ರಂದು ಅರ್ಧ ಏಕಾಹ ಭಜನಾ ಕಾರ್ಯಕ್ರಮ (ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ) ನಡೆಯಲಿದೆ. ಅದೇ ದಿನ ಪೂರ್ವಾಹ್ನ ಗಂಟೆ 10.30 ರಿಂದ ಶ್ರೀ ಸತ್ಯನಾರಾಯಣ ದೇವರ ಪೂಜೆ.ಸಂಜೆ ಗಂಟೆ 4 ರಿಂದ ಸಮಾರೋಪ ಸಮಾರಂಭ ನಡೆಯಲಿದೆ.