ಬೂಡು ದೈವಸ್ಥಾನದ ಬಳಿ ತೆರೆದ ಬಾವಿ ಕಾಮಗಾರಿ ಅಪೂರ್ಣ : ಅಪಾಯ ಸಂಭವಿಸಿದರೆ ನ.ಪಂ. ಹೊಣೆ : ವಾರ್ಡ್ ಸದಸ್ಯ ಆಕ್ರೋಶ

0

ಸುಳ್ಯ‌ ನಗರದ ಬೂಡು ಕಾಲನಿಯಲ್ಲಿ ದೈವಸ್ಥಾನದ ಮುಂಭಾಗದಲ್ಲಿ ನ.ಪಂ. ಅನುದಾನದಲ್ಲಿ ತೆರೆಯಲಾಗಿರುವ ಬಾವಿ ಕಾಮಗಾರಿ ಅಪೂರ್ಣಗೊಂಡಿದ್ದು, ಅದನ್ನು ನ.ಪಂ. ಹೆಚ್ಚುವರಿ ಅನುದಾನ ಇರಿಸಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅಪಾಯ ಸಂಭವಿಸಿದರೆ ನ.ಪಂ. ಹೊಣೆ ಹೊರಬೇಕಾದೀತು ಎಂದು ಹೇಳಿದ ಘಟನೆ ನ.ಪಂ. ಸಾಮಾನ್ಯ ಸಭದಯಲ್ಲಿ ನಡೆದಿದೆ.

ವಿಷಯ ಪ್ರಸ್ತಾಪಿಸಿದ ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್ ರವರು, ನ.ಪಂ. ನಿಂದ ಇಟ್ಟಿರುವ ಅನುದಾನದಲ್ಲಿ ದೈವಸ್ಥಾನದ ಎದುರು ಬಾವಿ ತೆರೆಯಲಾಗಿದೆ. ಕಾಮಗಾರಿ ಅಪೂರ್ಣಗೊಂಡಿದ್ದು ಅದು ಅಪಾಯದಲ್ಲಿದೆ. ಅದಕ್ಕೆ ಇನ್ನಷ್ಟು ಅನುದಾನ ನ.ಪಂ. ನಿಂದ ಇಡಬೇಕು ಎಂದು ಒತ್ತಾಯಿಸಿದರು.

ಆಗ ಉತ್ತರಿಸಿದ ಅಧ್ಯಕ್ಷರು ನಾವು ನ.ಪಂ. ನಿಂದ ಅನುದಾನ ನೀಡುವ ಸಂದರ್ಭ ಉಳಿಕೆ ಹಣವನ್ನು ದೈವಸ್ಥಾನ ಸಮಿತಿಯವರು ಭರಿಸುವುದಾಗಿ ಹೇಳಿದ್ದಾರೆ. ಆದ್ದರಿಂದಲೇ ನಾವು ಅನುದಾನ ನೀಡಿದ್ದೇವೆ ಎಂದು ಹೇಳಿದರು.

ಬಾವಿಗೆ ನ.ಪಂ. ನೀಡಿದ ಅನುದಾನದಲ್ಲಿ ಬಾವಿ ಸಾಧ್ಯ ಇಲ್ಲ. ಅದಕ್ಕೆ ರಿಂಗ್ ಅಳವಡಿಸದಿದ್ದರೆ ಅದು ಜರಿಯಬಹುದು ಎಂದು ಸದಸ್ಯ ರಿಯಾಜ್ ಕಟ್ಟೆಕಾರ್ ಹೇಳಿದಲ್ಲದೆ, ಅನುದಾನ ನೀಡಿದ್ದು ಒಳ್ಳೆಯದೇ. ಆದರೆ ನನ್ನ ಗಮನ ಕ್ಕೂ ತರಬೇಕಿತ್ತು. ಆ ಸಮಿತಿಯವರು ನನಗೆ ಹೇಳಿರಲಿಲ್ಲ. ಈಗ ಸಮಸ್ಯೆ ಆದಾಗ ನನ್ನ ಗಮನಕ್ಕೆ ತಂದಿದ್ದಾರೆ ಎಂದರು.

ಹೆಚ್ಚುವರಿ ಹಣವನ್ನು ಅವರೇ ಭರಿಸುವುದಾಗಿ ಹೇಳಿದ್ದಾರೆ. ಬೇಕಾದರೆ ಆ ಸಮಿತಿಯವರು, ನೀವು ಇದ್ದು ಸಭೆ ಮಾಡೋಣ ಎಂದು ಅಧ್ಯಕ್ಷ ರು ಹೇಳಿದರು. ಅಲ್ಲಿಗೆ ಚರ್ಚೆಗೆ ತೆರೆ ಬಿತ್ತು.