ಉದ್ಯೋಗದಲ್ಲಿದ್ದ ಯುವಕನ ಆರೋಗ್ಯದಲ್ಲಿ ಸಡನ್ನಾಗಿ ಏನಾಯ್ತು?
ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದ ಮಡಪ್ಪಾಡಿಯ ಯುವಕನೋರ್ವನಿಗೆ ಜಾಂಡಿಸ್ ತಗುಲಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನವಾದ ಘಟನೆ ವರದಿಯಾಗಿದೆ.
ಮಡಪ್ಪಾಡಿ ಗ್ರಾಮದ ಕೃಷ್ಣಪ್ಪ ಗೌಡ (ಹಾಲೆಮಾಜಲು) ಮಡಪ್ಪಾಡಿಯವರ ಪುತ್ರ ವಿಕ್ರಂ ಮೃತ ಯುವಕ.
ವಿಕ್ರಂ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದು, ಮೇ. 8ರಂದು ಮಡಪ್ಪಾಡಿಗೆ ಆಗಮಿಸಿದ್ದರು. ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ನಿನ್ನೆ ಬೆಳಿಗ್ಗೆ ಸುಳ್ಯ ಆಸ್ಪತ್ರೆಗೆ ಬಂದಾಗ ಅಲ್ಲಿ ಜಾಂಡಿಸ್ ಇರುವುದು ತಿಳಿಯಿತ್ತೆನ್ನಲಾಗಿದೆ. ತಕ್ಷಣ ಅಲ್ಲಿಂದ ಹೆಚ್ಚಿನ ಚಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಇಂದು ಮಡಪ್ಪಾಡಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಮೃತರು ತಂದೆ, ತಾಯಿ ಮಾಧವಿ, ಓರ್ವ ಸಹೋದರಿ ಮಡಪ್ಪಾಡಿ ಗ್ರಾಮ. ಪಂ ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ನವ್ಯ, ಭಾವ ವಿನಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.