ಮರ್ಕಂಜ ಗ್ರಾಮದ ಕೊಚ್ಚಿ ಚಿನ್ನಪ್ಪ ಗೌಡ ಎಂಬವರ ಪುತ್ರ ಜಯರಾಮ ಕೆ. ಸಿ. ಯವರು ನಿನ್ನೆ ನಿಧನರಾದರು. ಅವರಿಗೆ 58 ವರ್ಷ ಪ್ರಾಯವಾಗಿತ್ತು. ಜಯರಾಮರವರು ಎರಡು ದಿನದ ಹಿಂದೆ ಮನೆಯಲ್ಲಿ ರಕ್ತ ವಾಂತಿ ಮಾಡಿದ್ದರೆನ್ನಲಾಗಿದೆ. ಹೀಗಾಗಿ ಅವರನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ಕೊಂಡೋಯ್ದರು. ಅಲ್ಲಿ ವೈದ್ಯ ರು ಔಷಧಿ ನೀಡಿ ಹೆಚ್ಚಿನ ತಪಾಸಣೆಗೆ ಮಂಗಳೂರಿನ ಆಸ್ಪತ್ರೆಗೆ ಹೋಗುವತೆ ಸೂಚಿಸದರೆನ್ನಲಾಗಿದೆ.
ಅದರಂತೆ ಮರುದಿನ ಮಂಗಳೂರಿಗೆ ಹೋಗುವ ಸಂದರ್ಭದಲ್ಲಿ ಪರ್ಪುಂಜ ತಲುಪಿದಂತೆ ಜಯರಾಮರವರು ಮತ್ತೆ ರಕ್ತ ವಾಂತಿಯಾಗಿ ತೀರ್ವ ಅಶ್ವಸ್ತಗೊಂಡರೆನ್ನಲಾಗಿದೆ. ತಕ್ಷಣ ಅಲ್ಲಿಂದ ಪುತ್ತೂರು ಆಸ್ಪತ್ರೆಗೆ ಕೆರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಪರೀಕ್ಷಿಸಿ ಹೃದಯಾಘಾತ ಗೊಂಡು ಮೃತ ಪಟ್ಟಿರುವುದಾಗಿ ಹೇಳಿದರೆಂದು ತಿಳಿದು ಬಂದಿದೆ.
ಮೃತರು ಪತ್ನಿ ಜಯಶ್ರೀ, ಸಹೋದರರಾದ ಯಕ್ಷಗಾನ ಕಲಾವಿದ ಭೋಜಪ್ಪ ಕೊಚ್ಚಿ, ಮರ್ಕಂಜ ಸೊಸೆಟಿ ಉದ್ಯೋಗಿ ದಾಮೋದರ ಕೊಚ್ಚಿ, ಚಿತ್ರಕಲಾ ಶಿಕ್ಷಕ ಧನಂಜಯ ಕೊಚ್ಚಿ ಹಾಗೂ ಸಹೋದರಿಯರಾದ ಕಲಾವತಿ, ದೇವಕಿ, ಚಂದ್ರಾವತಿ, ಚಂಚಲಾಕ್ಷಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಜಯರಾಮ ಮೊದಲು ಮರ್ಕಂಜದಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದರು. ಕೆಲ ಸಮಯಗಳಿಂದ ಮರ್ಕಂಜ ಪೇಟೆಯಲ್ಲಿ ಹಸಿಮೀನು ವ್ಯಾಪಾರ ನಡೆಸುತ್ತಿದ್ದರು. ಇಂದು ಮೃತರ ಅಂತ್ಯ ಸಂಸ್ಕಾರ ಸ್ವಗೃಹದಲ್ಲಿ ನಡೆಯಿತು.