ಆಪರೇಷನ್ ಸಿಂಧೂರ್ ಯಶಸ್ವಿಯಾದ ಬಗ್ಗೆ ಹಾಗೂ ದೇಶದ ಸೈನಿಕರು ಹಾಗೂ ಜನತೆಗೆ ಒಳಿತಾಗುವಂತೆ ಮೇ.9 ರಂದು ಕುಲ್ಕುಂದ ಬಸವೇಶ್ವರ ದೇವಾಲಯದಲ್ಲಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಕುಲ್ಕುಂದ ವತಿಯಿಂದ ಶ್ರೀ ಬಸವೇಶ್ವರ ದೇವರಿಗೆ ರುದ್ರ ಪಾರಾಯಣ ಸಹಿತ ಮಹಾಪೂಜೆಯನ್ನು ಮಾಹಾಪೂಜೆ ಸೇವೆ ನಡೆಸಿ ಪ್ರಾರ್ಥನೆ ಸಲ್ಲಿಸಲಾಯಿತು. ಗಣೇಶೋತ್ಸವ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು, ದೇವಾಲಯದ ಆಡಳಿತ ಮಂಡಳಿಯವರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.