ಸ್ಕೂಟಿ ಹಾಗೂ ಕಾರು ಪರಸ್ಪರ ಡಿಕ್ಕಿ ಹೊಡೆದು ಸ್ಕೂಟಿ ಸವಾರರಿಗೆ ಗಾಯಗಳಾದ ಘಟನೆ ಇಂದು ಗುತ್ತಿಗಾರು ಬಳಿ ಸಂಭವಿಸಿದೆ.
ಗುತ್ತಿಗಾರಿನ ದಂಡಿನಮನೆ ಮೆಟ್ಟಿನಡ್ಕ ಕ್ರಾಸ್ ಬಳಿ ಬಿಜೆಪಿ ಮುಖಂಡ ಸುಭೋದ್ ಶೆಟ್ಟಿ ಮೇನಾಲರ ಕಾರು ಹಾಗೂ ಎದುರಿನಿಂದ ಬಂದ ಸ್ಕೂಟಿಯೊಂದಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ಸ್ಕೂಟಿ ಸವಾರರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಉಸ್ತುವಾರಿ ಸಚಿವರೊಂದಿಗೆ ಸುಳ್ಯಕ್ಕೆ ಬರುವಾಗ ಈ ಘಟನೆ ಸಂಭವಿಸಿದೆ.